ADVERTISEMENT

BBK 11: ಹೊಡೆದಾಡಿಕೊಂಡ ಜಗದೀಶ್, ರಂಜಿತ್‌ಗೆ ಗೇಟ್‌ಪಾಸ್ ನೀಡಿದ 'ಬಿಗ್ ಬಾಸ್'

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 7:59 IST
Last Updated 18 ಅಕ್ಟೋಬರ್ 2024, 7:59 IST
<div class="paragraphs"><p>(ಚಿತ್ರ ಕೃಪೆ –&nbsp;colorskannadaofficial)</p></div>

(ಚಿತ್ರ ಕೃಪೆ – colorskannadaofficial)

   

ಬೆಂಗಳೂರು: ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯ ಮೊದಲ ವಾರ ಯಮುನಾ ಶ್ರೀನಿಧಿ ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿದ್ದರು. ಎರಡನೇ ವಾರ ಯಾವುದೇ ಎಲಿಮಿನೇಷನ್ ಆಗಿರಲಿಲ್ಲ. ಈ ವಾರ ಜಗದೀಶ್ ಮತ್ತು ರಂಜಿತ್ ಹೊಡೆದಾಡಿಕೊಂಡಿದ್ದು, ಇಬ್ಬರಿಗೂ ಬಿಗ್ ಬಾಸ್‌ಗೆ ಗೇಟ್‌ಪಾಸ್ ನೀಡಿದ್ದಾರೆ.

ಇಂದು (ಶುಕ್ರವಾರ) ರಿಲೀಸ್ ಆಗಿರುವ ಪ್ರೋಮೋದಲ್ಲಿ ಜಗದೀಶ್ ಮತ್ತು ರಂಜಿತ್‌ ಅವರನ್ನು ಮುಖ್ಯದ್ವಾರದಿಂದ ಆಚೆ ಬನ್ನಿ ಎಂದು ಬಿಗ್ ಬಾಸ್ ಆದೇಶ ನೀಡಿದ್ದಾರೆ.

ADVERTISEMENT

ರಂಜಿತ್‌ ಅವರು ಎಲಿಮಿನೇಟ್ ಆಗಿರುವ ವಿಚಾರ ಇತರೆ ಸ್ಪರ್ಧಿಗಳಿಗೆ ದುಃಖ ತಂದಿದೆ. ಭವ್ಯ ಗೌಡ, ಉಗ್ರಂ ಮಂಜು ಹಾಗೂ ಮಾನಸಾ ಕಣ್ಣೀರಿಟ್ಟಿದ್ದಾರೆ.

ರಂಜಿತ್ ಅವರು ಬೇಕೆಂದು ಹೀಗೆ ಮಾಡಿಲ್ಲ, ಸಣ್ಣ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ ಬಿಗ್ ಬಾಸ್‌. ಅವರಿಗೆ ಇನ್ನೊಂದು ಚಾನ್ಸ್ ನೀಡಿ ಎಂದು ಮನೆಯ ಕೆಲ ಸದಸ್ಯರು ಮನವಿ ಮಾಡಿದ್ದಾರೆ. ಆದರೆ ಬಿಗ್ ಬಾಸ್ ಮನೆಯ ಮೇನ್ ಗೇಟ್ ಓಪನ್ ಆಗಿದ್ದು, ರಂಜಿತ್, ಜಗದೀಶ್ ಹೊರ ಹೋಗುವುದು ಖಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.