ADVERTISEMENT

Bigg Boss |ವಾರದ ಕಥೆ ಕಿಚ್ಚನ ಜೊತೆ: ಪಂಚಾಯ್ತಿಯಲ್ಲಿ ಜಗದೀಶ್‌ಗೆ ಖಡಕ್ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2024, 14:26 IST
Last Updated 5 ಅಕ್ಟೋಬರ್ 2024, 14:26 IST
<div class="paragraphs"><p>ಕಿಚ್ಚ ಸುದೀಪ್‌</p></div>

ಕಿಚ್ಚ ಸುದೀಪ್‌

   

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌ @ColorsKannadaOfficial

ಬೆಂಗಳೂರು: ನನಗೆ ನಾನೇ ಬಿಗ್‌ಬಾಸ್‌, ನನ್ನನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್‌ ನಡೆಸುತ್ತೀರಾ? ಹೀಗೆ ಬಿಗ್‌ಬಾಸ್‌ ಮನೆಯಲ್ಲಿ ಗುಡುಗಿದ್ದ ಲಾಯರ್‌ ಜಗದೀಶ್‌ ಅವರಿಗೆ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಜಗದೀಶ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸುದೀಪ್‌ ಅವರು ನೀವು ಹೇಳಿ ನಮಗೆ ಶೋ ಹೇಗೆ ನಡೆಸಿಕೊಡಬೇಕು ಅಂತಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರವಾಗಿ ಜಗದೀಶ್‌, ನಿಮ್ಮದು ಕರೆಕ್ಟ್‌ ಆಗಿದೆ, ನಿಮ್ಮದೇನು ತಪ್ಪಿಲ್ಲ ಎಂದು ಹೇಳಿದ್ದಾರೆ.

‘ಶೋ ಖಡಖಂಡಿತವಾಗಿಯೂ ಕರೆಕ್ಟ್‌ ಆಗಿದೆ. ಇಲ್ಲ ಅಂದಿದ್ರೆ ನನ್ನ ಮಗಂದ್‌ 11ನೇ ಸೀಸನ್‌ ದಾಟ್ತಾನೆ ಇರಲಿಲ್ಲ. ಕ್ಯಾಮೆರಾ ಮುಂದೆ ಬಿಗ್‌ಬಾಸ್‌ಗೆ ಚಾಲೆಂಜ್‌ ಮಾಡಿದ್ರರಲ್ಲಾ ಅದು ತಪ್ಪೇ ಅಲ್ಲಾ ಸರ್‌. ಅದೊಂದು ಜೋಕ್‌. ಬಿಗ್‌ಬಾಸ್‌ ಅನ್ನೋದು ಏನಿದೆ ಬ್ರದರ್‌, ಅದು ಅದ್ಭುತವಾದ ಒಂದು ಶೋ. ಅದನ್ನು ಇಂಪ್ರೂವ್ ಮಾಡುವಂತ ಸಾಧ್ಯತೆ ಈಗ ನಿಮ್ಮ ಕೈಯಲ್ಲಿದೆ. ಹಾಳ್‌ ಮಾಡೋಕೆ ನಿಮ್ಮಪ್ಪನಾಣೆಗೂ ಸಾಧ್ಯವಿಲ್ಲ’ ಎಂದು ಕಿಚ್ಚ ಸುದೀಪ್‌ ತಮ್ಮದೇ ರೀತಿಯಲ್ಲೇ ಲಾಯರ್‌ ಜಗದೀಶ್‌ ಅವರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಈ ವಾರ ಗೌತಮಿ ಜಾದವ್, ಶಿಶಿರ್ ಶಾಸ್ತ್ರಿ, ಯುಮುನಾ ಶ್ರೀನಿಧಿ, ಹಂಸಾ, ಭವ್ಯ ಗೌಡ, ಲಾಯರ್ ಜಗದೀಶ್‌, ಮಾನಸ, ಚೈತ್ರ ಕುಂದಾಪುರ, ಮೋಕ್ಷಿತಾ ಪೈ ಮನೆಯಿಂದ ಹೊರಹೋಗಲು ನಾಮಿನೇಟ್‌ ಆಗಿದ್ದಾರೆ. ಯಾರು ಮನೆಯಿಂದ ಹೊರಹೋಗಲಿದ್ದಾರೆ, ಯಾರು ಉಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.