ADVERTISEMENT

Bigg Boss Kannada 11: ಮೊದಲ ವಾರವೇ ಹೊರಬಿದ್ದ ಯಮುನಾ ಶ್ರೀನಿಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2024, 7:21 IST
Last Updated 7 ಅಕ್ಟೋಬರ್ 2024, 7:21 IST
<div class="paragraphs"><p><strong>ಯಮುನಾ ಶ್ರೀನಿಧಿ</strong></p></div>

ಯಮುನಾ ಶ್ರೀನಿಧಿ

   

ಬೆಂಗಳೂರು: ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯ ಮೊದಲ ವಾರ ಯಮುನಾ ಶ್ರೀನಿಧಿ ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಆರಂಭಿಕ ವಾರದಲ್ಲೇ ಗದ್ದಲ ಕೋಲಾಹಲದಿಂದ ಗಮನ ಸೆಳೆದಿದ್ದ ಸ್ವರ್ಗ–ನರಕಗಳನ್ನೊಳಗೊಂಡ ಬಿಗ್ ಬಾಸ್ ಮನೆಯಲ್ಲಿ ಯಮುನಾ ತಮ್ಮ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಮನೆಯಲ್ಲಿ ಅವರ ಧ್ವನಿ ಜೋರಾಗಿ ಕೇಳಿಬಂದರೂ ಪ್ರೇಕ್ಷಕನ ಸ್ಪಂದನೆ ಸಿಕ್ಕಿಲ್ಲ.

ADVERTISEMENT

ಪ್ರತಿ ಚಟುವಟಿಕೆ, ಮಾತುಕತೆ ವೇಳೆಯೂ ತಮ್ಮದೇ ಧಾಟಿಯಲ್ಲಿ ಉಪಸ್ಥಿತಿಯನ್ನು ತೋರಿಸುತ್ತಿದ್ದ ಯಮುನಾ, ಉಗ್ರಂ ಮಂಜು ಜೊತೆಗಿನ ಜಗಳದ ನಂತರ ತಣ್ಣಗಾಗಿದ್ದರು. ಕೊನೆಯ ದಿನವೂ ಅವರ ಮುನಿಸು ಮುಂದುವರಿದಿತ್ತು. ಟಾಸ್ಕ್‌ಗಳಲ್ಲೂ ಹುಮ್ಮಸ್ಸಿನಿಂದ ಭಾಗವಹಿಸಿದ್ದ ಅವರು ಮನೆಯಲ್ಲಿ ಮುಂದುವರಿಯುವಲ್ಲಿ ವಿಫಲರಾಗಿದ್ದಾರೆ.

ಹಾವಿಗೆ ಹೋಲಿಸಿದ ಧನರಾಜ್

ಯಮುನಾ ಅವರನ್ನು ಮತ್ತೊಬ್ಬ ಸ್ಪರ್ಧಿ ಧನರಾಜ್ ಹಾವಿಗೆ ಹೋಲಿಸಿದ್ದರು. ಬೆಳಗ್ಗೆ ಎದ್ದಾಗಿನಿಂದ ಬುಸಗುಟ್ಟುವ ಅವರು ಹಾವನ್ನು ಹೋಲುತ್ತಾರೆ ಎಂದು ವಾರಾಂತ್ಯದ ಕಿಚ್ಚನ ಪಂಚಾಯ್ತಿಯಲ್ಲಿ ಧನರಾಜ್ ಹೇಳಿದ್ದರು. ಯಾವ ಸ್ಪರ್ಧಿಗಳನ್ನು ಯಾವ ಪ್ರಾಣಿಗೆ ಹೋಲಿಸಬಹುದು ಎಂದು ಸುದೀಪ್ ಕೇಳಿದ ಪ್ರಶ್ನೆಗೆ ಧನರಾಜ್ ಈ ಉತ್ತರ ನೀಡಿದ್ದರು. ಯಾವಾಗ, ಎಲ್ಲಿ ಹೆಡೆ ಎತ್ತುತ್ತಾರೊ ಎಂದು ಭಯವಾಗುತ್ತದೆ ಎಂದು ಹೇಳಿದ್ದರು.

ಭಾನುವಾರದ ಎಪಿಸೋಡ್‌ನಲ್ಲಿ ಹಂಸಾ ಮತ್ತು ಯಮುನಾ ಕೊನೆಯ ಸ್ಥಾನಕ್ಕೆ ಕುಸಿದಿದ್ದರು. ಅಂತಿಮವಾಗಿ ಹಂಸಾ ಸೇಫ್ ಆಗುವ ಮೂಲಕ ಮುಂದಿನ ಹಂತಕ್ಕೆ ಕಾಲಿಟ್ಟರೆ, ಯಮುನಾ ಹೊರನಡೆದರು. ಹಂಸಾ ನಾಯಕಿಯಾಗಿರುವುದರಿಂದ ಇಮ್ಯುನಿಟಿ ಪಡೆದಿದ್ದಾರೆ. ಹಾಗಾಗಿ, ಎರಡನೇ ವಾರಕ್ಕೆ ಅವರನ್ನು ನಾಮಿನೇಟ್ ಮಾಡುವಂತಿಲ್ಲ. ಮೂರನೇ ವಾರಕ್ಕೆ ನೇರ ಪ್ರವೇಶ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.