ADVERTISEMENT

Bigg Boss Kannada: ಮನೆಯ ನಿಯಮ ಮೀರಿ ಜೈಲಿನಿಂದ ಹೊರಬಂದ ವರ್ತೂರು ಸಂತೋಷ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2023, 12:34 IST
Last Updated 24 ನವೆಂಬರ್ 2023, 12:34 IST
   

ಬೆಂಗಳೂರು: ಈ ಬಾರಿಯ ಬಿಗ್‌ ಬಾಸ್‌ ಮನೆಯಲ್ಲಿ ಈಗಾಗಲೇ ಹಲವರು ‘ನಾನು ಮನೆಯಿಂದ ಹೊರಗೆ ಹೋಗ್ತೀನಿ, ನನ್ನ ಹತ್ತಿರ ಇಲ್ಲಿ ಇರುವುದಕ್ಕೆ ಆಗುವುದಿಲ್ಲ’ ಎಂದು ಹೇಳಿ ಸೀನ್‌ ಕ್ರಿಯೆಟ್‌ ಮಾಡಿದ್ದಾರೆ. ಆ ಪಟ್ಟಿಯಲ್ಲಿ ವರ್ತೂರು ಸಂತೋಷ್‌ ಅವರೂ ಸೇರಿದ್ದಾರೆ. 

ಇದೀಗ ವರ್ತೂರು ಸಂತೋಷ್‌ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಆದರೆ ಬಿಗ್‌ ಬಾಸ್‌ ಆದೇಶ ಇಲ್ಲದಿದ್ದರೂ ರಾತ್ರಿ ಜೈಲಿನಿಂದ ಹೊರಬಿದ್ದಿದ್ದಾರೆ. ಅದಕ್ಕೆ ತುಕಾಲಿ ಸಂತೋಷ್‌ ಸಾಥ್‌ ನೀಡಿದ್ದಾರೆ. 

ವಾರಾಂತ್ಯದ ‘ಉತ್ತಮ’ ಮತ್ತು ‘ಕಳಪೆ’ ವೋಟಿಂಗ್‌ಗಳಲ್ಲಿ ಅತಿ ಹೆಚ್ಚು ವೋಟ್ ಪಡೆದು ವರ್ತೂರ್‌ ಸಂತೋಷ್‌ ’ಕಳಪೆ’ಯ ಹಣೆಪಟ್ಟಿ ಹಚ್ಚಿಕೊಂಡಿದ್ದಾರೆ. ‘ಯಾರು ಏನೇ ಹೇಳಲಿ ನಾನು ಏನು ಎನ್ನುವುದು ನನಗೆ ಗೊತ್ತು’ ಎಂದು ಹೇಳಿ ಜೈಲುಡುಗೆ ತೊಟ್ಟು ಜೈಲಿನೊಳಗೂ ಹೋಗಿದ್ದಾರೆ.

ADVERTISEMENT

ಜೈಲಿನೊಳಗಿದ್ದ ವರ್ತೂರ್ ಜೊತೆ ಹೊರಗಡೆ ಕುಳಿತು ತುಕಾಲಿ ಸಂತೋಷ್ ಮಾತಾಡುತ್ತ ಕೂತಿದ್ದರು. ಆಗ ವರ್ತೂರ್ ಸಂತೋಷ್‌ ‘ಜೈಲಿಗೆ ಬಂದವರಾರೂ ಈವರೆಗೆ ಆಚೆಗೆ ಬಂದಿಲ್ಲ ಅಲ್ವಾ?’ ಎಂದು ಕೇಳಿದ್ದಾರೆ. ತುಕಾಲಿ ಸಂತೋಷ್‌ ವರ್ತೂರ್‌ಗೆ ಕುಮ್ಮಕ್ಕು ನೀಡಿ ‘ಆಗಿದ್ದಾಗ್ಲಿ ಈಚೆಗೆ ಬಂದ್ಬಿಡು’ ಎಂದಿದ್ದಾರೆ.

ತಡಮಾಡದೇ ವರ್ತೂರ್ ಸಂತೋಷ್ ಜೈಲಿನ ಕಂಬಿಗಳ ನಡುವಿಂದ ನುಸುಳಿಕೊಂಡು ಆಚೆಗೆ ಬಂದಿದ್ದಾರೆ.
‘ಮನೆಯವರೆಲ್ಲ ಮಲ್ಕೊಂಡಿದ್ದಾರಲ್ವಾ?’ ಎಂದು ಅವರು ಕೇಳುತ್ತಿದ್ದ ಹೊತ್ತಿನಲ್ಲೇ ಸೋಪಾದ ಮೇಲೆ ಮಲಗಿದ್ದ ಸಂಗೀತಾ ತಲೆಎತ್ತಿನೋಡಿದ್ದಾರೆ.

ಜಿಯೋ ಸಿನಿಮಾದಲ್ಲಿ 24 ಗಂಟೆಯೂ ನೇರಪ್ರಸಾರವಾಗುವ ಬಿಗ್‌ ಬಾಸ್‌ ಸೀಸನ್‌10ರಲ್ಲಿ ಮನೆಯ ನಿಯಮ ಮೀರಿ ವರ್ತಿಸಿದ ವರ್ತೂರು ಸಂತೋಷ್‌ಗೆ ಹಾಗೂ ಕುಮ್ಮಕ್ಕು ನೀಡಿದ ತುಕಾಲಿಗೆ ಬಿಗ್‌ ಬಾಸ್‌ ಕಡೆಯಿಂದ ಶಿಕ್ಷೆ ಪಕ್ಕಾ ಎನ್ನುತ್ತಿದ್ದಾರೆ ನೆಟ್ಟಿಗರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.