ADVERTISEMENT

BBK11 | ವಾರದ ಪಂಚಾಯತಿಗೆ ಕಿಚ್ಚ ಗೈರು: ಇಂದು ಯೋಗರಾಜ್‌ ಭಟ್‌, ನಾಳೆ ಸೃಜನ್‌?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2024, 9:47 IST
Last Updated 26 ಅಕ್ಟೋಬರ್ 2024, 9:47 IST
   

ಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ಅವರು ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದು, ನಟ ಕಿಚ್ಚ ಸುದೀಪ್‌ ಅವರ ಬದಲು ಇಂದಿನ (ಶನಿವಾರ) ಪಂಚಾಯಿತಿಯನ್ನು ನಡೆಸಿಕೊಡಲಿದ್ದಾರೆ.

ಅ.20ರಂದು ನಟ ಸುದೀಪ್‌ ಅವರ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಮಾತೃ ವಿಯೋಗದ ನೋವಿನಲ್ಲಿರುವ ಅವರು ಈ ವಾರ ಬಿಗ್‌ಬಾಸ್ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ.

ಇಂದು(ಶನಿವಾರ) ಬಿಡುಗಡೆಗೊಂಡಿರುವ ಪ್ರೋಮೊದಲ್ಲಿ ಪಂಚರಂಗಿ ಸಿನಿಮಾದ ಡೈಲಾಗ್‌ ಮೂಲಕ ಮನೆ ಪ್ರವೇಶಿಸಿರುವ ಯೋಗರಾಜ್ ಭಟ್‌ ಅವರು, ಪರೋಕ್ಷವಾಗಿ ಮನೆಯ ಸದಸ್ಯರ ಕಾಲೆಳೆದಿದ್ದಾರೆ.

ADVERTISEMENT

ಹನುಮಂತ ಲಮಾಣಿ ಅವರನ್ನು ಬಳಿ ಕರೆದ ಭಟ್ರು, ಸ್ಪರ್ಧಿಗಳನ್ನೆಲ್ಲಾ ಕುರಿ ಎಂದು ಭಾವಿಸಿಕೊಂಡು, ಒಬ್ಬೊಬ್ಬರ ಬಗ್ಗೆ ಹೇಳು ಎಂದಿದ್ದಾರೆ. ಗೋಲ್ಡ್‌ ಸುರೇಶ್‌ ಅವರನ್ನು ಕಳ್ಳ ಟಗರು ಎಂದು, ಧರ್ಮ ಕೀರ್ತಿರಾಜ್‌ ಅವರನ್ನು ಕೋಡಿಲ್ಲದ ಟಗರು ಎಂದು ಹನುಮಂತ ಹೇಳಿದ್ದಾನೆ.

ನಾಳಿನ ಎಪಿಸೋಡ್‌ಗೂ ಸುದೀಪ್‌ ಅವರು ಗೈರಾಗುವುದು ಬಹುತೇಕ ಖಚಿತವಾಗಿದ್ದು, ಆ ಎಪಿಸೋಡ್‌ ಅನ್ನು ನಟ, ನಿರೂಪಕ ಸೃಜನ್‌ ಲೋಕೇಶ್‌ ಅವರು ನಡೆಸಿಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.