ಬೆಂಗಳೂರು: ಡಬಲ್ ಎಲಿಮಿನೇಷನ್ ಬೆನ್ನಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ‘ಸರಿಗಮಪ’ ಖ್ಯಾತಿಯ ಹನುಮಂತ ಲಮಾಣಿ ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ.
ಜೀ ಕನ್ನಡದ ರಿಯಾಲಿಟಿ ಶೋ ಸರಿಗಮಪ ಸೀಸನ್ 15ರಲ್ಲಿ ಭಾಗವಹಿಸಿ ಭಾರಿ ಜನಪ್ರಿಯತೆ ಗಳಿಸಿದ್ದ ಹನುಮಂತ ಅವರು ಮೂಲತಃ ಹಾವೇರಿ ಜಿಲ್ಲೆಯವರಾಗಿದ್ದಾರೆ. ಅದೇ ವಾಹಿನಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿ ಜನಮೆಚ್ಚುಗೆ ಪಡೆದಿದ್ದರು.
‘ಬೆಳ್ಳಿ ಮೂಡಿತು ಕೋಳಿ ಕೂಗಿತು ’ ಹಾಡಿನ ಮೂಲಕ ಮನೆಯೊಳಗೆ ಎಂಟ್ರಿ ಕೊಟ್ಟ ಹನುಮಂತ ಅವರು ಎಲ್ಲರನ್ನೂ ಪರಿಚಯಿಸಿಕೊಂಡಿದ್ದಾರೆ. ನಂತರ ಸೀದಾ ಡೈನಿಂಗ್ ಟೇಬಲ್ ಬಳಿಗೆ ತೆರಳಿ ಊಟ ಮಾಡಿದ್ದಾರೆ. ತಮ್ಮ ಮುಗ್ಧತೆ ಮತ್ತು ಲಘು ಹಾಸ್ಯದ ಮೂಲಕ ಇತರ ಸ್ಪರ್ಧಿಗಳ ಮನಸ್ಸು ಗೆದ್ದಿದ್ದಾರೆ.
ಬಿಗ್ಬಾಸ್ ಮನೆ ಪ್ರವೇಶಿಸುತ್ತಲೇ ಹನುಮಂತ ಅವರನ್ನು ಈ ವಾರದ ಕ್ಯಾಪ್ಟನ್ ಆಗಿ ಬಿಗ್ಬಾಸ್ ಹೆಸರಿಸಿದೆ. ಹಿಂದಿನ ಎರಡು ವಾರದಲ್ಲಿ ಹಂಸ ಮತ್ತು ಶಿಶಿರ್ ಕ್ಯಾಪ್ಟನ್ ಆಗಿದ್ದರು.
ಗುಂಪುಗಾರಿಕೆ, ಜಗಳದಿಂದ ಕಳೆದೆರಡು ವಾರ ಬಿಗ್ಬಾಸ್ ಮನೆಯಲ್ಲಿ ಭಾರಿ ಕೋಲಾಹಲ ಎದ್ದಿದ್ದು, ಮಿಲಾಯಿಸುವವರೆಗೂ ಹೋಗಿತ್ತು. ಲಾಯರ್ ಜಗದೀಶ್ ಮತ್ತು ಗೋಲ್ಡ್ ಸುರೇಶ್ ನಡುವೆ ಉಂಟಾದ ಜಗಳ ಇಡೀ ಮನೆಯನ್ನು ಆವರಿಸಿತ್ತು.
ದೈಹಿಕ ಹಲ್ಲೆ ನಡೆಸಿದ ಕಾರಣಕ್ಕೆ ರಂಜಿತ್ ಅವರನ್ನು, ಮಹಿಳೆಯರ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ ಲಾಯರ್ ಜಗದೀಶ್ ಅವರನ್ನು ಬಿಗ್ಬಾಸ್ ಮನೆಯಿಂದ ಹೊರಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.