ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯೊಂದರ ವಿಡಿಯೊ ಹರಿದಾಡುತ್ತಿದೆ. 16 ಸೆಕೆಂಡ್ನ ವಿಡಿಯೊ ಬೃಹತ್ ರ್ಯಾಲಿಯೊಂದರ ಐದು ತುಣುಕುಗಳನ್ನು ಒಳಗೊಂಡಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿರುವ ಜನ ಬಾವುಟ, ಬ್ಯಾನರ್ಗಳನ್ನು ಹಿಡಿದಿರುವಂತೆ ದೃಶ್ಯಗಳಲ್ಲಿ ಕಾಣುತ್ತದೆ. ‘ಮಣಿಪುರಕ್ಕೆ ಶಾಂತಿ ಬೇಕು’, ‘ಶಾಂತಿಗಾಗಿ ರ್ಯಾಲಿ’ ಎಂದು ಬ್ಯಾನರ್ಗಳಲ್ಲಿ ಬರೆದಿರುವಂತೆ ತೋರಿಸಲಾಗಿದೆ. ಜತೆಗೆ ಪ್ರತಿಭಟನಕಾರರು ಘೋಷಣೆಗಳನ್ನು ಕೂಗುವ ಧ್ವನಿಯೂ ವಿಡಿಯೊದಲ್ಲಿದೆ. ಈ ವಿಡಿಯೊ ಅನ್ನು ಹಂಚಿಕೊಳ್ಳುತ್ತಿರುವ ಹಲವರು, ‘ಮಣಿಪುರದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ; ಆದರೆ, ಭಾರತದ ಮಾಧ್ಯಮಗಳು ಇದನ್ನು ವರದಿ ಮಾಡುತ್ತಿಲ್ಲ’ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಈ ವಿಡಿಯೊ ಅಸಲಿ ಅಲ್ಲ.
ವಿಡಿಯೊ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕೃತಕ ಬುದ್ಧಿಮತ್ತೆಯಿಂದ (ಎಐ) ರೂಪಿಸಿದ ದೃಶ್ಯಗಳಲ್ಲಿ ಕಾಣುವಂತಹ ಕೆಲವು ವ್ಯತ್ಯಾಸಗಳು ಕಂಡುಬಂದವು. ವಿಡಿಯೊದಲ್ಲಿರುವ ಕಟ್ಟಡಗಳು, ಬ್ಯಾನರ್ಗಳು ವಾಸ್ತವದಲ್ಲಿ ಇರುವಂತೆ ಇರದೇ ಎಐನಿಂದ ಮಾಡಿದಂತಿದ್ದವು. ಜತೆಗೆ, ಅಸ್ಸಾಂನ ಮಾನವ್ ಜ್ಯೋತಿ ಗೊಗೊಯ್ ಎನ್ನುವವರು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ 2024ರ ಫೆಬ್ರುವರಿ 1ರಂದು ಇದೇ ವಿಡಿಯೊ ಅನ್ನು ಹಂಚಿಕೊಂಡಿದ್ದು, ವಿಡಿಯೊ ಅನ್ನು ಎಐ ಸಾಧನಗಳಿಂದ ರೂಪಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಇವೆಲ್ಲವುಗಳಿಂದ ಈ ವಿಡಿಯೊ ಅಸಲಿ ಅಲ್ಲ ಎನ್ನುವುದು ದೃಢಪಡುತ್ತದೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.