ADVERTISEMENT

Wayanad Landslide | ದುರಂತದ ಜಾಡಿನಲ್ಲಿ...

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 23:47 IST
Last Updated 30 ಜುಲೈ 2024, 23:47 IST
<div class="paragraphs"><p>ವಯನಾಡಿನಲ್ಲಿ ಭೂಕುಸಿತ</p></div>

ವಯನಾಡಿನಲ್ಲಿ ಭೂಕುಸಿತ

   

(ಪಿಟಿಐ ಚಿತ್ರ)

  • ವಯನಾಡ್‌ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ, ನೂಲ್‌ಪುಳ ಪ್ರದೇಶದಲ್ಲಿ ಜನರು ಮುಂಜಾವಿನ ಸವಿ ನಿದ್ದೆಯಲ್ಲಿದ್ದಾಗ, ಆರಂಭಿಕ ಭೂಕುಸಿತ ನಸುಕಿನ 2ರ ಸುಮಾರಿಗೆ ಘಟಿಸಿತು

    ADVERTISEMENT
  • ನಂತರದ ಭೂಕುಸಿತಗಳು 4.10ರ ಮುಂಜಾವಿನಲ್ಲಿ ಸಂಭವಿಸಿದವು. ಭೂಕುಸಿತದ ಜತೆಗೆ ರಕ್ಕಸ ಅಲೆಯಾಗಿ ಮಳೆ ನುಗ್ಗಿತು

  • ದುರಂತ ಸಂಭವಿಸಿರುವ ಈ ಸ್ಥಳಗಳು ಬೆಟ್ಟಗುಡ್ಡಗಳ ಪ್ರಾಕೃತಿಕ ಸೌಂದರ್ಯ, ಚಹಾ ತೋಟಗಳಿಂದಾಗಿ ಪ್ರವಾಸಿಗರ ನೆಚ್ಚಿನ ತಾಣಗಳಾಗಿದ್ದವು. ಇವುಗಳ ಸುತ್ತಮುತ್ತ ಹಲವು ಹೋಂಸ್ಟೇ ಮತ್ತು ರೆಸಾರ್ಟ್‌ಗಳೂ ಇವೆ

  • ಭೀಕರ ಭೂಕುಸಿತದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆಯ ನೆರವನ್ನು ಕೇರಳ ಸರ್ಕಾರ ಕೋರಿತು.

  • ದುರಂತದ ಮಾಹಿತಿ ಲಭಿಸಿದ ಒಂದು ತಾಸಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ 300 ಮಂದಿಯ ರಕ್ಷಣಾ ತಂಡ ಮೊದಲು ಸ್ಥಳ ತಲುಪಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿತು

  • ನೆಲಸಮವಾದ ಮನೆಗಳ ಅವಶೇಷಗಳಡಿ ಹೊಳೆಯಂತೆ ಹರಿಯುತ್ತಿದ್ದ ಪ್ರವಾಹದ ನೀರಿನ ನಡುವೆ ಸಿಲುಕಿ ಮೃತಪಟ್ಟವರ ದೇಹಗಳನ್ನು ಹೊರತೆಗೆಯುತ್ತಾ ಹೋದರು. ಮೊದಲಿಗೆ ಗಾಯಾಳುಗಳನ್ನು ರಕ್ಷಿಸಿ, ವಯನಾಡ್‌ ಆಸ್ಪತ್ರೆಗೆ ದಾಖಲಿಸಲಾಯಿತು

  • ಅವಶೇಷಗಳಡಿ ಸಿಲುಕಿ ಬದುಕಲು ಹೋರಾಡುತ್ತಿದ್ದವರನ್ನು ಪತ್ತೆಹಚ್ಚಿ,‌ ರಕ್ಷಿಸಲು ಸೇನೆಯಲ್ಲಿ ವಿಶೇಷ ತರಬೇತಿ ಪಡೆದಿರುವ ಬೆಲ್ಜಿಯನ್‌ ಮ್ಯಾಲಿನ್‌ವಾ, ಲ್ಯಾಬ್ರಡಾರ್‌, ಜರ್ಮನ್‌ ಶೆಫರ್ಡ್‌ ತಳಿಯ ಶ್ವಾನ ದಳ ಬಳಸಿಕೊಳ್ಳಲಾಯಿತು

  • ತಕ್ಷಣಕ್ಕೆ ಘಟನಾ ಸ್ಥಳ ತಲುಪಲು, ಗಾಯಾಳುಗಳನ್ನು ರಕ್ಷಿಸಲು ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಮತ್ತು ಕೆಲವು ಉಪಕರಣಗಳನ್ನು ಬಳಸಿಕೊಳ್ಳಲಾಯಿತು

  • ಕೇರಳ ಸರ್ಕಾರವು, ಸ್ಥಳೀಯ ಸ್ವ ಆಡಳಿತ ಇಲಾಖೆಯ ಪ್ರಧಾನ ನಿರ್ದೇಶಕ ಸೀರಂ ಸಾಂಬಶಿವ ರಾವ್ ಅವರನ್ನು ವಯನಾಡ್ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳ ಸಮನ್ವಯಕ್ಕೆ ವಿಶೇಷ ಅಧಿಕಾರಿಯಾಗಿ ನೇಮಿಸಿತು

  • 45 ಪರಿಹಾರ ಕೇಂದ್ರಗಳಿಗೆ ಸುಮಾರು 3,000 ಸಂತ್ರಸ್ತರನ್ನು ಸ್ಥಳಾಂತರ ಮಾಡಲಾಗಿದೆ

  • ದುರಂತದಲ್ಲಿ ಮಡಿದವರಿಗೆ ತಲಾ ₹2 ಲಕ್ಷದಂತೆ ಪರಿಹಾರವನ್ನು ಅವರ ಅವಲಂಬಿತರಿಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

  • ಈ ದುರಂತದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ರಾಜ್ಯದಲ್ಲಿ ಎರಡು ದಿನ (ಜುಲೈ 30 ಮತ್ತು 31) ಶೋಕ ಘೋಷಿಸಿದ್ದು, ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.