ADVERTISEMENT

ಗುಂಡಿನ ದಾಳಿ: ಗೋವು ಕಳ್ಳಸಾಗಣೆ ಶಂಕಿತನ ಸಾವು

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 15:10 IST
Last Updated 24 ಜುಲೈ 2024, 15:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ರಾಜಸ್ತಾನದ ಡೀಗ್ ಜಿಲ್ಲೆಯಲ್ಲಿ ಬುಧವಾರ ಬೆಳಗಿನ ಜಾವ ಗೋವು ಕಳ್ಳಸಾಗಣೆದಾರ ಎನ್ನಲಾದ ವ್ಯಕ್ತಿಯೊಬ್ಬರು, ಇದೇ ಕೃತ್ಯದಲ್ಲಿ ತೊಡಗಿದ್ದ ಶಂಕಿತ ಕಳ್ಳಸಾಗಣೆದಾರರ ಗುಂಪು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.   

ಖಚಿತ ಮಾಹಿತಿ ಆಧರಿಸಿ ಪೊಲೀಸರು, ಸಂದೀಪ್‌ ಪ್ರಜಾಪತ್ ಎಂಬಾತ ಚಾಲನೆ ಮಾಡುತ್ತಿದ್ದ ಎರಡು ಗೋವುಗಳಿದ್ದ ಪಿಕ್‌ಅಪ್‌ ವಾಹನ ಬೆನ್ನಟ್ಟಿದ್ದಾರೆ. ಆದರೆ, ವಾಹನ ನಿಲ್ಲಿಸುವ ಯತ್ನ ಫಲ ನೀಡಿಲ್ಲ. ಇದೇ ವೇಳೆ ಪಿಚಮುರ್ ಬಸ್‌ ನಿಲ್ದಾಣ ಬಳಿ ವಾಹನಕ್ಕೆ ಗೋವು ಹತ್ತಿಸುತ್ತಿದ್ದ ಗುಂಪೊಂದು ಗುಂಡು ಹಾರಿಸಿದ್ದು, ಸಂದೀಪ್‌ ಮೃತಪಟ್ಟಿದ್ದಾರೆ.

ಗುಂಡು ಹಾರಿಸಿದ ಗುಂಪು ಪರಾರಿಯಾಗಿದೆ. ಸಂದೀಪ್‌ ಜೊತೆಗಿದ್ದ ನರೇಶ್‌ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೋನಾಗಾಂವ್ ನಿವಾಸಿಯಾದ ಸಂದೀಪ್ ಕೃಷಿಕ. ತಂದೆ–ತಾಯಿಗೆ ಒಬ್ಬನೇ ಮಗ. ತಿಂಗಳ ಹಿಂದಷ್ಟೇ ಪಿಕ್‌ಅಪ್ ವಾಹನ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎಸ್‌ಪಿ ರಾಜೇಶ್‌ ಕುಮಾರ್ ಮೀನಾ, ಮೃತ ಸಂದೀಪ್‌ ಗೋವು ಕಳ್ಳಸಾಗಣೆದಾರನೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆದಿದೆ ಎಂದು ತಿಳಿಸಿದರು. ಪೊಲೀಸರು ಎನ್‌ಕೌಂಟರ್ ನಡೆಸಿದ್ದಾರೆ. ಸಂದೀಪ್‌ ಸಾವಿಗೆ ಪೊಲೀಸರೇ ಹೊಣೆ ಎಂದು ಆರೋಪಿಸಿದ ಕುಟುಂಬ ಸದಸ್ಯರು ಪೊಲೀಸ್‌ ಠಾಣೆ ಬಳಿ ಗಲಾಟೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.