ತಿರುವನಂತಪುರ: ಕೋಯಿಕ್ಕೋಡ್ನಲ್ಲಿರುವ ‘ಎನ್ಐಟಿ ಕ್ಯಾಲಿಕಟ್’ ಕ್ಯಾಂಪಸ್ನಲ್ಲಿಯೇ ಸಹಾಯಕ ಪ್ರಾಧ್ಯಾಪಕರೊಬ್ಬರಿಗೆ ಕತ್ತು ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
ಕೃತ್ಯಕ್ಕೆ ಹಳೆಯ ದ್ವೇಷ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ತಮಿಳುನಾಡಿನ ಈರೋಡ್ನ ಜಯಚಂದ್ರನ್ (35) ಹಲ್ಲೆಗೊಳಗಾಗಿದ್ದು, ಆರೋಪಿ ಸೇಲಂನ ವಿನೋದ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.