ADVERTISEMENT

ಕೈ ಕೊಟ್ಟ ಸ್ವಯಂಚಾಲಿತ ಸಿಗ್ನಲ್‌: ಭೀಕರ ರೈಲು ಅಪಘಾತಕ್ಕೆ 15 ಸಾವು!

ಕೈ ಕೊಟ್ಟ ಸ್ವಯಂಚಾಲಿತ ಸಿಗ್ನಲ್‌: ಭೀಕರ ರೈಲು ಅಪಘಾತಕ್ಕೆ 15 ಸಾವು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜೂನ್ 2024, 14:57 IST
Last Updated 17 ಜೂನ್ 2024, 14:57 IST

ಪಶ್ಚಿಮ ಬಂಗಾಳದಲ್ಲಿ ಸೋಮವಾರ ಬೆಳಿಗ್ಗೆಯೇ ಭೀಕರ ರೈಲು ಅಪಘಾತ ಸಂಭವಿಸಿದ್ದು, 15 ಪ್ರಯಾಣಿಕರು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಲಭ್ಯ ದಾಖಲೆಗಳ ಪ್ರಕಾರ, ಸ್ವಯಂಚಾಲಿತ ಸಿಗ್ನಲಿಂಗ್‌ ವ್ಯವಸ್ಥೆ ಕೈಕೊಟ್ಟಿದ್ದು, ರೆಡ್‌ ಸಿಗ್ನಲ್‌ ಇದ್ದರೂ ಮುಂದೆ ಚಲಿಸುವಂತೆ ಗೂಡ್ಸ್‌ ರೈಲು ಚಾಲಕನಿಗೆ ಸೂಚನೆ ಹೋಗಿತ್ತು ಎಂದು ರೈಲ್ವೆ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.