ADVERTISEMENT

ಪುಣೆಯಲ್ಲಿ ಐಷಾರಾಮಿ ಕಾರು ಡಿಕ್ಕಿ: ಬೈಕ್‌ನಲ್ಲಿ ಹೋಗುತ್ತಿದ್ದ ಆಹಾರ ವಿತರಕ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2024, 4:32 IST
Last Updated 11 ಅಕ್ಟೋಬರ್ 2024, 4:32 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಪುಣೆ: ಐಷಾರಾಮಿ ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಪುಣೆಯ ಮುಂಧ್ವಾ ಪ್ರದೇಶದಲ್ಲಿ ಗುರುವಾರ ತಡರಾತ್ರಿ ವರದಿಯಾಗಿದೆ.

ADVERTISEMENT

ಮೃತ ವ್ಯಕ್ತಿಯನ್ನು ಮೃತ ರೌವೂಫ್‌ ಶೇಖ್ ಎಂದು ಗುರುತಿಸಲಾಗಿದೆ. ಅವರು ಆಹಾರ ವಿತರಕನಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅವಘಡ ಸಂಭವಿಸಿದ ತಕ್ಷಣವೇ ಕಾರು ಚಾಲಕ ಪರಾರಿಯಾಗಿದ್ದ. ಆದರೆ, ನಂತರ ಆತನನ್ನು ಬಂಧಿಸಲಾಗಿದೆ.

'ಕಾರು, ಮಧ್ಯರಾತ್ರಿ 1.35ರ ಸುಮಾರಿಗೆ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ, ಅದರಲ್ಲಿದ್ದ (ಬೈಕನಲ್ಲಿದ್ದ) ಮೂವರು ಗಾಯಗೊಂಡಿದ್ದರು. ನಂತರ, ಶೇಖ್ ಅವರ ಬೈಕ್‌ಗೆ ಕಾರು ಹಿಂಬದಿಯಿಂದ ಗುದ್ದಿತ್ತು. ಇದರಿಂದಾಗಿ, ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು. ಘಟನೆಯ ನಂತರ ಆರೋಪಿ ಆಯುಷ್ ತಯಾಲ್ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆತನ ಬೆನ್ನತ್ತಿದ್ದ ಪೊಲೀಸರು, ಹಡಪ್‌ಸರ ಪ್ರದೇಶದಲ್ಲಿ ಬಂಧಿಸಿದ್ದಾರೆ. ಈ ಸಂಬಂಧ ಮುಂಡ್ವಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ' ಎಂದು ಪುಣೆಯ ಎಸಿಪಿ ಮನೋಜ್‌ ಪಾಟೀಲ್‌ ತಿಳಿಸಿದ್ದಾರೆ.

ತನಿಖೆ ಪ್ರಗತಿಯಲ್ಲಿದೆ. ಕಾರಿನ ಚಾಲಕ ಮದ್ಯ ಸೇವಿಸಿದ್ದ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.