ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಫೆಬ್ರುವರಿ 4ರಿಂದ 11ರವರೆಗೆ ಬೃಹತ್ ಜನಸಂಪರ್ಕ ಅಭಿಯಾನಹಮ್ಮಿಕೊಂಡಿದೆ. ಈ ಅಂಗವಾಗಿ ಪಕ್ಷದ ಕಾರ್ಯಕರ್ಯರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ಚಾಲನೆ ನೀಡಿದರು.
‘ಗಾಂವ್ ಚಲೋ‘ ಹೆಸರಿನ ಅಭಿಯಾನದಲ್ಲಿ ಪಕ್ಷದ 30 ಲಕ್ಷ ಸದಸ್ಯರು ನಗರ ಪ್ರದೇಶದ ಎಲ್ಲ ಬೂತ್ಗಳು ಮತ್ತು ಗ್ರಾಮಾಂತರ ಪ್ರದೇಶದ ಏಳು ಲಕ್ಷ ಬೂತ್ಗಳನ್ನು ತಲುಪಬೇಕು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪರ ಯೋಜನೆಗಳ ಕುರಿತು ತಿಳಿಸಬೇಕು’ ಎಂದು ನಡ್ಡಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.