ADVERTISEMENT

ತೆಲಂಗಾಣ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿಆರ್‌ಎಸ್‌ ಪಕ್ಷದ ಕೇಶವ ರಾವ್

ಪಿಟಿಐ
Published 5 ಜುಲೈ 2024, 11:40 IST
Last Updated 5 ಜುಲೈ 2024, 11:40 IST
<div class="paragraphs"><p>ರಾಜ್ಯಸಭೆ </p></div>

ರಾಜ್ಯಸಭೆ

   

ನವದೆಹಲಿ: ಬಿಆರ್‌ಎಸ್‌ ಪಕ್ಷದ ರಾಜ್ಯಸಭೆ ಸದಸ್ಯ ಕೇಶವ ರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರಿಗೆ ಗುರುವಾರ ರಾಜೀನಾಮೆ ಪತ್ರ ಸಲ್ಲಿಸಿದರು. ಇಂದು ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಉಪರಾಷ್ಟ್ರಪತಿ ಕಚೇರಿ ಮೂಲಗಳು ತಿಳಿಸಿವೆ.

ADVERTISEMENT

ಕೇಶವ ರಾವ್‌ ಅವರು ಬುಧವಾರ ಬಿಆರ್‌ಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದರು. ಕೇಶವ ರಾವ್ ಅವರು 2020ರಿಂದ ತೆಲಂಗಾಣದಿಂದ ರಾಜ್ಯಸಭೆ ಸದಸ್ಯರಾಗಿದ್ದರು. ಕೇಶವ ರಾವ್‌ ಅವರ ರಾಜೀನಾಮೆಯಿಂದ ರಾಜ್ಯಸಭೆಯಲ್ಲಿ ಒಟ್ಟು 16 ಸ್ಥಾನಗಳು ಖಾಲಿ ಉಳಿದಿವೆ.

ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು, ಮಹಾರಾಷ್ಟ್ರದಿಂದ ಮೂರು, ಅಸ್ಸಾಂ ಮತ್ತು ಬಿಹಾರದಿಂದ ತಲಾ ಎರಡು, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರಾ, ತೆಲಂಗಾಣದಿಂದ ತಲಾ ಒಂದು ಸ್ಥಾನ ಸೇರಿದಂತೆ 16 ಸ್ಥಾನಗಳು ಖಾಲಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.