ADVERTISEMENT

ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ: ಜು.15ಕ್ಕೆ ರಾಜ್ಯಪಾಲರ ಅರ್ಜಿ ವಿಚಾರಣೆ

ಪಿಟಿಐ
Published 10 ಜುಲೈ 2024, 13:39 IST
Last Updated 10 ಜುಲೈ 2024, 13:39 IST
ಆನಂದ್‌ ಬೋಸ್‌
ಆನಂದ್‌ ಬೋಸ್‌   

ಕೋಲ್ಕತ್ತ: ‘ರಾಜಭವನಕ್ಕೆ ತೆರಳಲು ಭಯವಾಗುತ್ತದೆ ಎಂದು ಮಹಿಳೆಯೊಬ್ಬರು ನನ್ನ ಬಳಿ ಹೇಳಿಕೊಂಡಿದ್ದಾರೆ’ ಎಂದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಈ ವಿಷಯವಾಗಿ ಬೇರೆ ಯಾವ ಹೇಳಿಕೆಯನ್ನೂ ನೀಡಬಾರದು ಎಂದು ಆದೇಶಿಸಬೇಕು’ ಎಂದು ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸುವುದಾಗಿ ಕೋರ್ಟ್‌ ಹೇಳಿದೆ.

ಮಮತಾ ಅವರ ಹೇಳಿಕೆ ಸಂಬಂಧ ಜೂನ್‌ 28ರಂದು ರಾಜ್ಯಪಾಲ ಬೋಸ್‌ ಅವರು, ಮಮತಾ ಹಾಗೂ ಇತರ ಟಿಎಂಸಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಅರ್ಜಿಗೆ ಸಂಬಂಧಿಸಿ ಮಧ್ಯಂತರ ಆದೇಶ ನೀಡಬೇಕು ಎಂದು ಈಗ ರಾಜ್ಯಪಾಲರು ನ್ಯಾಯಾಲಯವನ್ನು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT