ಭಕ್ತರ ದರ್ಶನಕ್ಕೆ ಮುಕ್ತಗೊಂಡ ಉತ್ತರಾಖಂಡದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ದೇವಸ್ಥಾನಗಳು
ಚಿತ್ರ ಕೃಪೆ: ಪಿಟಿಐ
ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಯಿತು. ಗಂಗೋತ್ರಿ ದೇವಾಲಯವನ್ನು ಮಧ್ಯಾಹ್ನ 12.20ಕ್ಕೆ ತೆರೆಯಲಾಯಿತು.
ADVERTISEMENT
ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ
ದೇವಾಲಯದ ಮುಂದಿರುವ ನಂದಿ ವಿಗ್ರಹಕ್ಕೆ ನಮಸ್ಕರಿಸುತ್ತಿರುವ ಸಿಎಂ ಪುಷ್ಕರ್ ಸಿಂಗ್ ಧಾಮಿ
ದೇವಾಲಯಕ್ಕೆ ಬಂದಿದ್ದ ಭಕ್ತಾದಿಗಳೊಂದಿಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ
ದೇವಾಲಯಗಳ ದ್ವಾರಗಳನ್ನು ತೆಗೆಯುವುದನ್ನು ಸುಮಾರು 10,000 ಭಕ್ತಾದಿಗಳು ಕಣ್ತುಂಬಿಕೊಂಡರು
ಸುಮಾರು 20 ಕ್ವಿಂಟಾಲ್ಗೂ ಹೆಚ್ಚು ಬಗೆಯ ಹೂವುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು.
ಹಿಮಾಲಯದ ಗಢವಾಲ್ ಪರ್ವತ ಶ್ರೇಣಿಗಳಲ್ಲಿರುವ ಈ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲ ಆರಂಭವಾದ ನಂತರ ಮುಚ್ಚಲಾಗುತ್ತದೆ. ಬೇಸಿಗೆ ಆರಂಭಗೊಂಡ ನಂತರ ಮತ್ತೆ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ.