ADVERTISEMENT

ಇಂದೋರ್: ಬಿಜೆಪಿ ಅಭ್ಯರ್ಥಿಯ ಪಾದಕ್ಕೆರಗಿದ ಕಾಂಗ್ರೆಸ್‌ ಶಾಸಕ

ಪಿಟಿಐ
Published 8 ಅಕ್ಟೋಬರ್ 2023, 16:32 IST
Last Updated 8 ಅಕ್ಟೋಬರ್ 2023, 16:32 IST
<div class="paragraphs"><p>ಕಾಂಗ್ರೆಸ್‌ </p></div>

ಕಾಂಗ್ರೆಸ್‌

   

(ಕಡತ ಚಿತ್ರ)

ಇಂದೋರ್: ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪರಸ್ಪರ ಕೆಸರೆರಚಾಟ ನಡೆದಿದೆ.

ADVERTISEMENT

ಇದಕ್ಕೆ ಅಪವಾದ ಎನ್ನುವಂತೆ ಎರಡೂ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮತದಾರರ ಮುಂದೆಯೇ ಸ್ನೇಹಪರತೆ ಮರೆದರು.

ಕಾಂಗ್ರೆಸ್‌ ಶಾಸಕ ಸಂಜಯ್‌ ಶುಕ್ಲಾ ಅವರು ಇಂದೋರ್‌ –1 ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಮತ್ತೆ ಅವರನ್ನೇ ಕಣಕ್ಕಿಳಿಸಲು ಕೈಪಾಳಯ ಸಿದ್ಧತೆ ನಡೆಸಿದೆ. ಈ ಕ್ಷೇತ್ರಕ್ಕೆ ಬಿಜೆಪಿಯಿಂದ ಈಗಾಗಲೇ ವಿಜಯವರ್ಗೀಯ ಅವರ ಹೆಸರು ಘೋಷಣೆಯಾಗಿದೆ. ಇಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಂಜಯ್‌ ಅವರು, ವಿಜಯವರ್ಗೀಯ ಅವರ ಪಾದ ಮುಟ್ಟಿ ನಮಸ್ಕರಿಸಿದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಇಬ್ಬರ ಒಳ್ಳೆಯತನಕ್ಕೆ ನೆರೆದಿದ್ದವರು ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.