ADVERTISEMENT

ನೇಪಾಳ ಅವಳಿ ಬಸ್ ದುರಂತ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಪಿಟಿಐ
Published 14 ಜುಲೈ 2024, 16:01 IST
Last Updated 14 ಜುಲೈ 2024, 16:01 IST
<div class="paragraphs"><p>ನೇಪಾಳ ಬಸ್ ದುರಂತ</p></div>

ನೇಪಾಳ ಬಸ್ ದುರಂತ

   

– ಪಿಟಿಐ ಚಿತ್ರ

ಕಠ್ಮಂಡು: ಚಿತ್ವಾನ್ ಜಿಲ್ಲೆಯಲ್ಲಿ ಕಳೆದ ವಾರ ಎರಡು ಬಸ್‌ಗಳು ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವವನ್ನು ನೇಪಾಳದ ರಕ್ಷಣಾ ಸಿಬ್ಬಂದಿ ಭಾನುವಾರ ಪತ್ತೆ ಹಚ್ಚಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿದೆ.

ADVERTISEMENT

ಶುಕ್ರವಾರ ಏಳು ಭಾರತೀಯರು ಸೇರಿದಂತೆ 65 ಪ್ರಯಾಣಿಕರನ್ನು ಹೊತ್ತ ಎರಡು ಬಸ್‌ಗಳು ಪ್ರವಾಹಕ್ಕೆ ಸಿಲುಕಿದ ತ್ರಿಶೂಲಿ ನದಿಯಲ್ಲಿ ನಾಪತ್ತೆಯಾಗಿತ್ತು. ಘಟನೆ ನಡೆದ ಕೂಡಲೇ ಮೂವರು ಈಜಿ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ.

ಶೋಧ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ ಕೇವಲ ಐದು ಮೃತದೇಹಗಳು ಪತ್ತೆಯಾಗಿವೆ. ಇದರಲ್ಲಿ ಒಬ್ಬ ಭಾರತೀಯನ ಮೃತ ದೇಹ ಮಾತ್ರ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.