ನವದೆಹಲಿ: 120 ಮಂದಿ ವಕೀಲರು ಇಂದು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು(ಎಎಪಿ) ಸೇರಿದ್ದಾರೆ. ಕಾನೂನು ಸಚಿವೆ ಅತಿಶಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಆದಾಗಲೆಲ್ಲ ಅವುಗಳನ್ನು ರಕ್ಷಿಸುವುದು ವಕೀಲರ ಕರ್ತವ್ಯವಾಗಿದೆ ಎಂದು ಅತಿಶಿ ಹೇಳಿದ್ದಾರೆ.
ಸ್ವತಂತ್ರ ತನಿಖಾ ಸಂಸ್ಥೆಗಳು ಕೊಲೆಗಡುಕರ ರೀತಿ ವರ್ತಿಸುತ್ತಿವೆ. ಚುನಾವಣಾ ಬಾಂಡ್ ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದ್ದು, ದೇಶದಾದ್ಯಂತ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಕುಸಿಯುತ್ತಿವೆ ಎಂದಿದ್ದಾರೆ.
ಎಎಪಿ ಸೇರಿದ ವಕೀಲರ ಪೈಕಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಬಾರ್ ಅಸೋಸಿಯೇಷನ್ನ ಮಾಜಿ ಕಾರ್ಯಕಾರಿ ಸದಸ್ಯರಾದ ಸುಷ್ಮಾ ತ್ಯಾಗಿ ಮತ್ತು ನೀಲಂ ಸಿಂಗ್ ಸೇರಿದ್ದಾರೆ.
ಅವರ ಜೊತೆ ದೆಹಲಿಯ ವಿವಿಧ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 118 ವಕೀಲರೂ ಪಕ್ಷ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.