ADVERTISEMENT

ಕುಡಿದ ಮತ್ತಿನಲ್ಲಿ 30 ವರ್ಷ ಹಿಂದಿನ 'ಜೋಡಿ ಕೊಲೆ' ರಹಸ್ಯ ಬಿಚ್ಚಿಟ್ಟ ವ್ಯಕ್ತಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2023, 3:11 IST
Last Updated 18 ಜೂನ್ 2023, 3:11 IST
 ಅವಿನಾಶ್‌ ಪವಾರ್ (ಚಿತ್ರ: ಟ್ವಿಟರ್)
ಅವಿನಾಶ್‌ ಪವಾರ್ (ಚಿತ್ರ: ಟ್ವಿಟರ್)   

ಮುಂಬೈ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮೂವತ್ತು ವರ್ಷದ ಹಿಂದೆ ತಾನು ಮಾಡಿದ 'ಜೋಡಿ ಕೊಲೆ' ರಹಸ್ಯವನ್ನು ಬಹಿರಂಗಗೊಳಿಸಿದ್ದು, ಇದೀಗ ಶಿಕ್ಷೆಗೆ ಒಳಗಾಗಿದ್ದಾನೆ.

1993ರಲ್ಲಿ ಮುಂಬೈನ ಲೋನಾವಾಲಾ ಎಂಬಲ್ಲಿ ವೃದ್ದ ದಂಪತಿಗಳ ಬರ್ಬರ ಹತ್ಯೆ ನಡೆದಿತ್ತು. ಮೂವರು ಕೊಲೆಗಾರರಲ್ಲಿ ಇಬ್ಬರು ಪೊಲೀಸರ ಕೈಗೆ ಸಿಕ್ಕಿದ್ದು, ಅವಿನಾಶ್‌ ಪವಾರ್ ಎಂಬಾತ ತಲೆಮರೆಸಿಕೊಂಡಿದ್ದನು. ಪೊಲೀಸರ ಕೈಗೆ ಸಿಗುವ ಭಯದಲ್ಲಿ ಅವಿನಾಶ್‌ ಮತ್ತೆಂದು ಹುಟ್ಟುರಾದ ಲೋನಾವಾಲಾಗೆ ಹಿಂದಿರುಗಿ ಹೋಗಿರಲಿಲ್ಲ.

ಸ್ವಲ್ಪ ವರ್ಷಗಳ ನಂತರ ಮಹಾರಾಷ್ಟ್ರದ ಔರಂಗಾಬಾದ್‌ಗೆ ತೆರಳಿದ ಅವಿನಾಶ್‌ ಪವಾರ್‌, ಅಲ್ಲಿ ಅಮಿತ್ ಪವಾರ್ ಎಂಬ ಹೆಸರಿನಲ್ಲಿ ಚಾಲನಾ ಪರವಾನಗಿ ಪಡೆಯುತ್ತಾನೆ. ವಿಕ್ರೋಲಿಯಲ್ಲಿ ನೆಲೆಸಿದ ಅವಿನಾಶ್‌ ತನ್ನ ಹೊಸ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಪಡೆಯುತ್ತಾನೆ. ಅಲ್ಲೇ ಒಬ್ಬ ಹುಡುಗಿಯನ್ನು ಮದುವೆಯಾಗಿ ಕುಟುಂಬ ಸಮೇತ ನೆಲಸುತ್ತಾನೆ.

ADVERTISEMENT

ಕೊಲೆ ನಡೆದು ಮೂವತ್ತು ವರ್ಷವಾದರೂ ತಾನು ಪೊಲೀಸರ ಕೈಗೆ ಸಿಗಲಿಲ್ಲವಲ್ಲ ಎಂದು ಕೊಂಡ ಅವಿನಾಶ್‌ ಇನ್ನು ಮುಂದೆ ತಾನು ಪೊಲೀಸರ ಕೈಗೆ ಸಿಗಲು ಸಾಧ್ಯವೇ ಇಲ್ಲ ಎಂಬ ಧೃಡ ನಂಬಿಕೆಯಲ್ಲಿರುತ್ತಾನೆ. ಈ ಅತಿಯಾದ ನಂಬಿಕೆಯೇ ಅವಿನಾಶ್‌ಗೆ ಮುಳುವಾಗಿದೆ. ಕುಡಿದ ಮತ್ತಿನಲ್ಲಿ ವೃದ್ದ ದಂಪತಿ ಮನೆ ದರೋಡೆ ಮಾಡಿ ಕೊಲೆ ಮಾಡಿರುವ ಬಗ್ಗೆ ಸ್ನೇಹಿತರ ಮುಂದೆ ಬಾಯ್ಬಿಟ್ಟಿದ್ದಾನೆ. ಈ ವಿಷಯ ಪೊಲೀಸರಿಗೆ ತಿಳಿದು ಶುಕ್ರವಾರ ಅವಿನಾಶ್‌ನನ್ನು ವಿಕ್ರೋಲಿಯಲ್ಲಿ ಬಂಧಿಸಿದ್ದಾರೆ.

‘ಅವಿನಾಶ್ ಪವಾರ್ 30 ವರ್ಷಗಳ ಹಿಂದೆ ಲೋನಾವಾಲಾದಲ್ಲಿ ನಡೆದ ಜೋಡಿ ಕೊಲೆಯ ಆರೋಪಿಯಾಗಿದ್ದು, ಕೊಲೆ ಮಾಡಿ ತಲೆಮರೆಸಿಕೊಂಡಿದ್ದನು. ವೃದ್ದ ದಂಪತಿಗಳು ಅವಿನಾಶ್‌ ಮನೆಯ ಸಮೀಪ ಅಂಗಡಿ ಹೊಂದಿದ್ದು, ಅವರ ಮನೆ ದರೋಡೆ ಮಾಡಲು ಅವಿನಾಶ್‌ ಯೋಜಿಸಿದ್ದನು. ದರೋಡೆ ಸಮಯ ವೃದ್ಧ ದಂಪತಿಯನ್ನು ಕೊಂದು ಪರಾರಿಯಾಗಿದ್ದನು. ಇದೀಗ 30 ವರ್ಷಗಳ ನಂತರ ಆರೋಪಿ ನಮ್ಮ ಕೈಗೆ ಸಿಕ್ಕಿದ್ದಾನೆ‘ ಎಂದು ಉಪ ಪೊಲೀಸ್ ಆಯುಕ್ತ (ಮುಂಬೈ ಕ್ರೈಂ ಬ್ರಾಂಚ್) ರಾಜ್‌ ತಿಲಕ್‌ ರೋಷನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.