ADVERTISEMENT

ಕೆ.ಮುರಳೀಧರನ್‌ ಪರಾಭವ: ಕಚೇರಿಯಲ್ಲೇ ಹೊಡೆದಾಡಿದ ಕಾಂಗ್ರೆಸ್‌ ಮುಖಂಡರು

ಪಿಟಿಐ
Published 8 ಜೂನ್ 2024, 16:17 IST
Last Updated 8 ಜೂನ್ 2024, 16:17 IST
<div class="paragraphs"><p>ಕಚೇರಿಯಲ್ಲೇ ಹೊಡೆದಾಡಿದ ಕಾಂಗ್ರೆಸ್ಸಿಗರು</p></div>

ಕಚೇರಿಯಲ್ಲೇ ಹೊಡೆದಾಡಿದ ಕಾಂಗ್ರೆಸ್ಸಿಗರು

   

ಎಕ್ಸ್‌ ಚಿತ್ರ

ತ್ರಿಶೂರ್‌: ಕೇರಳದ ತ್ರಿಶೂರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೆ.ಮುರಳೀಧರನ್‌ ಅವರು ಪರಾಭವಗೊಂಡ ಬೆನ್ನಲ್ಲೇ ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಸಮಿತಿ(ಡಿಸಿಸಿ) ಕಚೇರಿಯಲ್ಲಿ ಶುಕ್ರವಾರ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. 

ADVERTISEMENT

ತ್ರಿಶೂರ್‌ ಡಿಸಿಸಿ ಅಧ್ಯಕ್ಷ ಜೋಸ್‌ ವಲ್ಲೂರ್‌ ಮತ್ತು ಆತನ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ತ್ರಿಶೂರ್‌ ಡಿಸಿಸಿ ಕಾರ್ಯದರ್ಶಿ ಸಂಜೀವನ್‌ ಕುರಿಯಾಚಿರಾ ಅವರು ದೂರು ನೀಡಿದ್ದಾರೆ. ಈ ಸಂಬಂಧ ಜೋಸ್‌ ವಲ್ಲೂರ್‌ ಹಾಗೂ ಇತರ 19 ಆರೋಪಿಗಳ ಮೇಲೆ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದಾರೆ.

‘ತ್ರಿಶೂರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲಲು ಮಾಜಿ ಸಂಸದ ಟಿ.ಎನ್‌.ಪ್ರತಾಪನ್‌ ಹಾಗೂ ಡಿಸಿಸಿ ಅಧ್ಯಕ್ಷ ಜೋಸ್‌ ವಲ್ಲೂರ್‌ ಅವರೇ ಕಾರಣ’ ಎಂದು ಪರಾಜಿತ ಅಭ್ಯರ್ಥಿ ಕೆ.ಮುರಳೀಧರನ್‌ ಅವರ ಬೆಂಬಲಿಗರೂ ಆಗಿರುವ ಕುರಿಯಾಚಿರಾ ಟೀಕಿಸಿದ್ದರು. ಅಲ್ಲದೆ, ಡಿಸಿಸಿ ಕಚೇರಿಯ ಮುಂಭಾಗ ಈ ಸಂಬಂಧಿತ ಪೋಸ್ಟರ್‌ಗಳನ್ನು ಅಂಟಿಸಿದ್ದರು. ಈ ಕಾರಣದಿಂದಲೇ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿ, ನಟ ಗೋಪಿನಾಥ್‌ ಅವರು ತ್ರಿಶೂರ್‌ ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಕೇರಳ ರಾಜ್ಯದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದಾರೆ. ಅವರು, ಹತ್ತಿರದ ಪ್ರತಿಸ್ಪರ್ಧಿ ಸಿಪಿಐ ವಿ.ಎಸ್‌. ಸುನೀಲ್‌ ಕುಮಾರ್‌ ಎದುರು 74,686 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಎಲ್‌. ಮುರಳೀಧರನ್‌ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.