ADVERTISEMENT

ಶ್ರೀಲಂಕಾ ನೌಕಾಪಡೆ ಹಡಗು ಡಿಕ್ಕಿ: ಭಾರತದ ಮೀನುಗಾರ ಸಾವು, ಒಬ್ಬರು ನಾಪತ್ತೆ

ಪಿಟಿಐ
Published 1 ಆಗಸ್ಟ್ 2024, 9:55 IST
Last Updated 1 ಆಗಸ್ಟ್ 2024, 9:55 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಶ್ರೀಲಂಕಾ ನೌಕಾಪಡೆಯ ಹಡಗು ಹಾಗೂ ಭಾರತದ ಮೀನುಗಾರಿಕಾ ದೋಣಿಯೊಂದು ಡಿಕ್ಕಿ ಹೊಡೆದು, ಭಾರತದ ಒಬ್ಬ ಮೀನುಗಾರ ಮೃತಪಟ್ಟಿದ್ದಾರೆ. ಇನ್ನೊಬ್ಬರು ಕಾಣೆಯಾಗಿದ್ದಾರೆ. ಕಚ್ಚತೀವು ದ್ವೀಪದ ಐದು ನಾಟಿಕಲ್ ಮೈಲಿ ದೂರದಲ್ಲಿ ಗುರುವಾರ ಬೆಳಿಗ್ಗೆ ಘಟನೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತದಲ್ಲಿರುವ ಶ್ರೀಲಂಕಾದ ಹಂಗಾಮಿ ರಾಯಭಾರಿಯನ್ನು ಕರೆಸಿಕೊಂಡು ಘಟನೆಯ ಬಗ್ಗೆ ತೀವ್ರ ಪ್ರತಿಭಟನೆ ದಾಖಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ADVERTISEMENT

ಘಟನೆಯಲ್ಲಿ ಉಂಟಾದ ಜೀವ ಹಾನಿಗೆ ನಾವು ಆಘಾತ ಹಾಗೂ ಕಳವಳ ವ್ಯಕ್ತಪಡಿಸಿದ್ದೇವೆ. ಕೊಲಂಬೊದಲ್ಲಿರುವ ನಮ್ಮ ಹೈಕಮಿಷನರ್‌ ಕೂಡ ಶ್ರೀಲಂಕಾ ಸರ್ಕಾರದೊಂದಿಗೆ ಇದನ್ನು ಚರ್ಚಿಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.