ADVERTISEMENT

ಶ್ರೀನಗರ | ಭಯೋತ್ಪಾದನೆ ಜತೆ ನಂಟು: ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು

ಪಿಟಿಐ
Published 1 ಅಕ್ಟೋಬರ್ 2023, 14:02 IST
Last Updated 1 ಅಕ್ಟೋಬರ್ 2023, 14:02 IST
ಅಮಾನತು (ಪ್ರಾತಿನಿಧಿಕ ಚಿತ್ರ)
ಅಮಾನತು (ಪ್ರಾತಿನಿಧಿಕ ಚಿತ್ರ)   

ಶ್ರೀನಗರ: ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪ ಸಂಬಂಧ ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ಡಿಎಸ್‌ಪಿ ಆದಿಲ್ ಮುಷ್ತಾಕ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೌಹಾರ್ ಅಹ್ಮದ್ ಖಾನ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಭಾನುವಾರ ಅಮಾನತುಗೊಳಿಸಿದೆ. 

ಆದಿಲ್ ಮುಷ್ತಾಕ್ ವಿರುದ್ಧ ಭ್ರಷ್ಟಾಚಾರ, ಸಾಕ್ಷ್ಯ ನಾಶ ಮತ್ತು ಭಯೋತ್ಪಾದಕರ ಜತೆ ನಂಟು ಹೊಂದಿದ ಗಂಭೀರ ಸ್ವರೂಪದ ಆರೋಪಗಳಿವೆ. ಈ ಕುರಿತು ತನಿಖೆ ನಡೆಸಲು ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಐವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿತ್ತು. 

ಭಯೋತ್ಪಾದನೆ ಜತೆಗಿನ ನಂಟು ಹೊಂದಿದ ಆರೋಪ ಸಂಬಂಧ ಡಿಎಸ್‌ಪಿ ದೇವಿಂದರ್ ಸಿಂಗ್ ಬಂಧನವಾದ ಮೂರು ವರ್ಷಗಳ ಬಳಿಕ ಆದಿಲ್ ಮುಷ್ತಾಕ್‌ ಅವರನ್ನು ಬಂಧಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.