ADVERTISEMENT

ಮರಾಠ ಮೀಸಲಾತಿ: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಜರಾಂಗೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 14:49 IST
Last Updated 25 ಸೆಪ್ಟೆಂಬರ್ 2024, 14:49 IST
<div class="paragraphs"><p>ರಾಠ ಮೀಸಲಾತಿ&nbsp; ಹೋರಾಟಗಾರ ಮನೋಜ್ ಜಾರಂ</p></div>

ರಾಠ ಮೀಸಲಾತಿ  ಹೋರಾಟಗಾರ ಮನೋಜ್ ಜಾರಂ

   

ಜಲ್ನಾ (ಪಿಟಿಐ): ಮರಾಠ ಮೀಸಲಾತಿಗೆ ಆಗ್ರಹಿಸಿ ಹೋರಾಟಗಾರ ಮನೋಜ್ ಜಾರಂಗೆ ಅವರು ಕೈಗೊಂಡಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಬುಧವಾರ ಮುಕ್ತಾಯಗೊಂಡಿದೆ.

ಸೆ.17ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಜರಾಂಗೆ ಅವರು 9ನೇ ದಿನಕ್ಕೆ ತಮ್ಮ ಉಪವಾಸವನ್ನು ಕೈಬಿಟ್ಟಿದ್ದಾರೆ.

ADVERTISEMENT

ಅಂತರವಾಲಿ ಸಾರಥಿ ಗ್ರಾಮದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜರಾಂಗೆ, ‘ಮರಾಠ ಸಮುದಾಯದ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದೇನೆ. ಮರಾಠ ಸಮುದಾಯಕ್ಕೆ ನೋವುಂಟು ಮಾಡಿದವರಿಗೆ ಪಾಠ ಕಲಿಸುತ್ತೇವೆ’ ಎಂದರು.

ಮರಾಠ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಜರಾಂಗೆ ಕಳೆದ ಒಂದು ವರ್ಷದಲ್ಲಿ ನಡೆಸಿದ ಆರನೇ ಉಪ‍ವಾಸ ಸತ್ಯಾಗ್ರಹ ಇದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.