ADVERTISEMENT

ರೋಗಿಗಳ ವರದಿ ಹಾಳೆಯಿಂದ ತಟ್ಟೆ ತಯಾರಿಸಿದ KEM ಆಸ್ಪತ್ರೆಯ ಸಿಬ್ಬಂದಿಗೆ ನೋಟಿಸ್

ಪಿಟಿಐ
Published 6 ಜುಲೈ 2024, 13:00 IST
Last Updated 6 ಜುಲೈ 2024, 13:00 IST
<div class="paragraphs"><p>ಮುಂಬೈನ ಕಿಂಗ್ ಎಡ್ವರ್ಡ್‌ ಸ್ಮಾರಕ ಆಸ್ಪತ್ರೆಯಲ್ಲಿ ಸಿದ್ಧಪಡಿಸಿದ ಕಾಗದದ ತಟ್ಟೆಗಳು</p></div>

ಮುಂಬೈನ ಕಿಂಗ್ ಎಡ್ವರ್ಡ್‌ ಸ್ಮಾರಕ ಆಸ್ಪತ್ರೆಯಲ್ಲಿ ಸಿದ್ಧಪಡಿಸಿದ ಕಾಗದದ ತಟ್ಟೆಗಳು

   

ಎಕ್ಸ್ ಚಿತ್ರ

ಮುಂಬೈ: ರೋಗಿಗಳ ವರದಿಯನ್ನು ಒಳಗೊಂಡ ಹಾಳೆಯನ್ನೇ ತಿನ್ನುವ ತಟ್ಟೆಯನ್ನಾಗಿಸಿಕೊಂಡು ಚಿತ್ರೀಕರಿಸಿದ ಕಿಂಗ್‌ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯ ಆರು ಜನ ಸಿಬ್ಬಂದಿಗೆ ಅಲ್ಲಿನ ಆಡಳಿತ ಮಂಡಳಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ADVERTISEMENT

ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ಮಾಜಿ ಮೇಯರ್ ಕಿಶೋರಿ ಪಂಡ್ನೇಕರ್‌, ಸರ್ಕಾರಿ ಸ್ವಾಮ್ಯ ಕೆಇಎಂ ಆಸ್ಪತ್ರೆಯಲ್ಲಿ ರೋಗಿಗಳ ವರದಿ ಹಾಳೆಗಳು ತಟ್ಟೆಗಳನ್ನಾಗಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ಡೀನ್ ಡಾ. ಸಂಗೀತಾ ರಾವತ್, ‘ಅವು ರೋಗಿಗಳ ವರದಿ ಹಾಳೆಗಳಲ್ಲ. ಬದಲಿಗೆ ಸಿ.ಟಿ. ಸ್ಕ್ಯಾನ್‌ ವರದಿ ಹಾಕಲು ಬಳಸಿದ ಫೋಲ್ಡರ್‌ಗಳು. ಅವುಗಳನ್ನು ಬಳಸಿ ತಟ್ಟೆ ಮಾಡಲಾಗಿದೆ. ಆದರೆ ಇಲ್ಲಿ ಆಗಿರುವ ತಪ್ಪೆಂದರೆ, ಈ ಹಾಳೆಗಳನ್ನು ಚೂರು ಚೂರು ಮಾಡಿರಲಿಲ್ಲ’ ಎಂದಿದ್ದಾರೆ.

‘ಈ ಕುರಿತು ಆರು ಜನ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.