ADVERTISEMENT

ಕೊಲ್ಕತ್ತ ಅತ್ಯಾಚಾರ, ಕೊಲೆ ಪ್ರಕರಣ: ಏಮ್ಸ್‌ ತಜ್ಞರೊಂದಿಗೆ ಸಿಬಿಐ ಚರ್ಚೆ

ಪಿಟಿಐ
Published 27 ಆಗಸ್ಟ್ 2024, 15:21 IST
Last Updated 27 ಆಗಸ್ಟ್ 2024, 15:21 IST
.
.   

ನವದೆಹಲಿ: ಆರ್‌.ಜಿ ಕರ್‌ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಮತ್ತು ವಿಧಿವಿಜ್ಞಾನ ಪರೀಕ್ಷೆ ವರದಿ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌ ) ತಜ್ಞರೊಂದಿಗೆ ಸಿಬಿಐ ಚರ್ಚೆ ನಡೆಸಲಿದೆ ಎಂದು  ಅಧಿಕಾರಿಗಳು ಮಂಗಳವಾರ ತಿಳಿಸಿದರು.

ಸಿಬಿಐ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲು ವರದಿಗಳನ್ನು ಏಮ್ಸ್‌ಗೆ ಕಳುಹಿಸಲಿದೆ. ಇದರಿಂದ ಆರೋಪಿ ಸಂಜಯ್ ರಾಯ್‌ ಒಬ್ಬನೇ ಕೃತ್ಯ ಎಸಗಿದ್ದನೇ ಅಥವಾ ಇತರರು ಭಾಗಿಯಾಗಿದ್ದರೇ ಎಂಬ ಬಗ್ಗೆ ತನಿಖೆಗೆ ನೆರವಾಗಲಿದೆ ಎಂದು ಹೇಳಿದರು.

ಪ್ರಕರಣದ ತನಿಖೆಯನ್ನು ಆಗಸ್ಟ್‌ 14ರಿಂದ ಸಿಬಿಐ ವಹಿಸಿಕೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.