ADVERTISEMENT

Wayanad Landslides | ನಾಪತ್ತೆಯಾದವರ ಪಟ್ಟಿ ಶೀಘ್ರವೇ ಬಿಡುಗಡೆ: ಕೇರಳ ಸರ್ಕಾರ

ಪಿಟಿಐ
Published 6 ಆಗಸ್ಟ್ 2024, 13:38 IST
Last Updated 6 ಆಗಸ್ಟ್ 2024, 13:38 IST
<div class="paragraphs"><p>ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯ</p></div>

ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯ

   

–ರಾಯಿಟರ್ಸ್ ಚಿತ್ರ

ವಯನಾಡ್‌: ಭೂಕುಸಿತ ಅವಘಡದ ಬಳಿಕ ನಾಪತ್ತೆಯಾಗಿರುವ ನಿವಾಸಿಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಕೇರಳ ಸರ್ಕಾರ ಮಂಗಳವಾರ ತಿಳಿಸಿದೆ.

ADVERTISEMENT

‘ನಾಪತ್ತೆಯಾದವರ ನಿಖರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಭೂಕುಸಿತದ ಎಲ್ಲ ಬಾಧಿತರಿಗೂ ಸಮಗ್ರವಾಗಿ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ಕಂದಾಯ ಸಚಿವ ಕೆ.ರಾಜನ್‌ ತಿಳಿಸಿದರು.

ಜಗತ್ತಿಗೆ ಮಾದರಿ ಆಗುವಂತೆ ಪುನರ್ವಸತಿ ಕಾರ್ಯ ಕೈಗೊಳ್ಳಲಾಗುವುದು ಎಂದರು. ನಾಮಾವಶೇಷ ಆಗಿರುವ ಚೂರಲ್‌ಮಲ, ಮುಂಡಕ್ಕೈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.