ADVERTISEMENT

ಹೊಸಬರಿಗೆ ಯೋಗ್ಯ ಸಂಬಳ ನೀಡಿ: ವಕೀಲರಿಗೆ ಚಂದ್ರಚೂಡ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:20 IST
Last Updated 26 ಅಕ್ಟೋಬರ್ 2024, 15:20 IST
ಡಿ.ವೈ. ಚಂದ್ರಚೂಡ್
ಡಿ.ವೈ. ಚಂದ್ರಚೂಡ್   

ನವದೆಹಲಿ: ‘ತಮ್ಮ ಬಳಿ ಹೊಸದಾಗಿ ಕೆಲಸಕ್ಕೆ ಸೇರುವ ಕಾನೂನು ಪದವೀಧರರಿಗೆ ಹಿರಿಯ ವಕೀಲರು ಸೂಕ್ತ ವೇತನ ನೀಡಬೇಕು’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ.

‘ಕಾನೂನು ವೃತ್ತಿ ಕಷ್ಟಕರವಾದುದು. ಆರಂಭಿಕ ವರ್ಷಗಳಲ್ಲಿನ ಅಡಿಪಾಯವು ಯುವ ವಕೀಲರನ್ನು ಅವರ ವೃತ್ತಿಜೀವನದುದ್ದಕ್ಕೂ ಉತ್ತಮ ಸ್ಥಾನದಲ್ಲಿರಿಸುತ್ತದೆ’ ಎಂದು ಆಲ್‌ ಇಂಡಿಯಾ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

‘ವೃತ್ತಿಯಲ್ಲಿ ಯಾವಾಗಲೂ ಏರಿಳಿತಗಳು ಇರುತ್ತವೆ. ಕೆಲಸದಲ್ಲಿ ಕಠಿಣ ಪರಿಶ್ರಮದಿಂದ ತೊಡಗಿಸಿಕೊಳ್ಳಲು ಹಾಗೂ ಪ್ರಾಮಾಣಿಕವಾಗಿರಲು ಸೂಕ್ತ ಸಂಬಳ ನೀಡಿ ಪ್ರೋತ್ಸಾಹಿಸುವುದು ಮುಖ್ಯವಾಗಿದೆ’ ಎಂದಿದ್ದಾರೆ.

ADVERTISEMENT

‘ಹೊಸಬರು ಕಲಿಯಲಿಕ್ಕಾಗಿಯೇ ಹಿರಿಯ ವಕೀಲರ ಕಚೇರಿಗೆ ಬರುತ್ತಾರೆ. ನಿಮ್ಮೊಂದಿಗೆ ಹಂಚಿಕೊಳ್ಳಲು ಅವರಲ್ಲಿ ಸಾಕಷ್ಟು ಸಂಗತಿಗಳಿರುತ್ತವೆ. ನೀವು ಹೇಳಿಕೊಡಬೇಕಾದ ಹಲವು ವಿಷಯಗಳಿರುತ್ತವೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.