ADVERTISEMENT

ಅಯೋಧ್ಯೆ ತಲುಪಿದ 400 ಕೆ.ಜಿ ತೂಕದ ಬೀಗ–ಕೀಲಿಕೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜನವರಿ 2024, 5:05 IST
Last Updated 20 ಜನವರಿ 2024, 5:05 IST
<div class="paragraphs"><p>400 ಕೆ.ಜಿ ತೂಕದ ಬೀಗ ಮತ್ತು ಕೀಲಿಕೈ</p></div>

400 ಕೆ.ಜಿ ತೂಕದ ಬೀಗ ಮತ್ತು ಕೀಲಿಕೈ

   

ಚಿತ್ರ: ಎಎನ್‌ಐ ಸ್ಕ್ರೀನ್‌ಗ್ರ್ಯಾಬ್‌

ಅಯೋಧ್ಯೆ: ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಯೋಧ್ಯೆಯಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಎಲ್ಲ ಕಡೆಯಲ್ಲೂ ರಾಮನ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ADVERTISEMENT

ಪ್ರತಿಷ್ಠಾಪನೆ ಹಿನ್ನಲೆ ಅಲಿಗಢದಿಂದ ಅಯೋಧ್ಯೆಗೆ ಸುಮಾರು 400 ಕೆ.ಜಿ ತೂಕದ ಬೀಗ–ಕೀಲಿಕೈ ತರಲಾಗಿದೆ. ಇದನ್ನು ತಯಾರಿಸಲು ಸುಮಾರು 6 ತಿಂಗಳು ತೆಗೆದುಕೊಳ್ಳಲಾಗಿದೆ ಎಂದು ಬೀಗ ತಯಾರಕ ಸತ್ಯಪ್ರಕಾಶ್ ಶರ್ಮಾ ತಿಳಿಸಿದ್ದಾರೆ.

ಬೃಹತ್ ಬೀಗವು 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವಿದೆ ಎಂದು ತಿಳಿಸಿದ್ದಾರೆ.

ಕಾಶ್ಮೀರ, ಅಫ್ಗಾನಿಸ್ತಾನದಿಂದ ಬಂದ ಉಡುಗೊರೆ ಹಸ್ತಾಂತರ

ಕಾಶ್ಮೀರ, ತಮಿಳುನಾಡು ಮತ್ತು ಅಫ್ಗಾನಿಸ್ತಾನದಿಂದ ಬಂದ ಉಡುಗೊರೆಗಳನ್ನು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಅವರು ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಅವರಿಗೆ ಹಸ್ತಾಂತರಿಸಿದ್ದಾರೆ.

‘ಕಾಶ್ಮೀರದಿಂದ ಬಂದ ಮುಸ್ಲಿಂ ಬಂಧುಗಳು ನನ್ನನ್ನು ಭೇಟಿಯಾಗಿ ರಾಮಮಂದಿರ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾಶ್ಮೀರದಿಂದ ತಂದ 2 ಕೆ.ಜಿ ತೂಕದ ಶುದ್ಧ ಕೇಸರಿಯನ್ನು ರಾಮಮಂದಿರಕ್ಕೆ ನೀಡುವಂತೆ ನನಗೆ ತಿಳಿಸಿದ್ದಾರೆ’ ಎಂದು ಅಲೋಕ್‌ ಕುಮಾರ್ ಹೇಳಿದರು.

‘ತಮಿಳುನಾಡಿನ ರೇಷ್ಮೆ ತಯಾರಕರು ರಾಮಮಂದಿರವನ್ನು ಚಿತ್ರಿಸಿರುವ ರೇಷ್ಮೆ ಬೆಡ್‌ಶೀಟ್ ಅನ್ನು ಕಳುಹಿಸಿದ್ದಾರೆ. ರಾಮನ ಅಭಿಷೇಕಕ್ಕಾಗಿ ಅಫ್ಗಾನಿಸ್ತಾನದಿಂದ ಕುಭಾ(ಕಾಬೂಲ್) ನದಿಯ ನೀರನ್ನು ಕಳುಹಿಸಿಕೊಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.