ADVERTISEMENT

‘ವಿವೇಕ’ ತಿಳಿಯದ ಮೋದಿ, ವಿವೇಕಾನಂದ ಸ್ಮಾರಕದಲ್ಲಿ ಯಾವ ಧ್ಯಾನ ಮಾಡುವರು: ಸಿಬಲ್

ಪಿಟಿಐ
Published 29 ಮೇ 2024, 12:24 IST
Last Updated 29 ಮೇ 2024, 12:24 IST
<div class="paragraphs"><p>ಕಪಿಲ್ ಸಿಬಲ್ ಮತ್ತು&nbsp;ನರೇಂದ್ರ ಮೋದಿ</p></div>

ಕಪಿಲ್ ಸಿಬಲ್ ಮತ್ತು ನರೇಂದ್ರ ಮೋದಿ

   

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಧ್ಯಾನಕ್ಕೆ ಕೂರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ‘ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಕನ್ಯಾಕುಮಾರಿಗೆ ಹೋಗುವುದಾದರೆ ಒಳ್ಳೆಯದು ಅಥವಾ ವಿವೇಕಾನಂದರ ಬರಹ ಮತ್ತು ಭಾಷಣಗಳಿಂದ ಸ್ಫೂರ್ತಿ ಪಡೆಯುವ ಸಲುವಾಗಿ ಹೋಗುವುದಾದರೆ, ಅದು ಇನ್ನೂ ಒಳ್ಳೆಯದು’ ಎಂದು ಬುಧವಾರ ಹೇಳಿದರು.

‘ವಿವೇಕ’ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿ ಏನು ತಾನೇ ‘ಧ್ಯಾನ’ ಮಾಡಬಲ್ಲರು’ ಎಂದಿದ್ದಾರೆ.

ADVERTISEMENT

ಕಾಂಗ್ರೆಸ್‌ ದೂರು: ‘ಪ್ರಧಾನಿ ನರೇಂದ್ರ ಮೋದಿ ಅವರು, ಮೇ 30ರಿಂದ ಕನ್ಯಾಕುಮಾರಿಯ ಧ್ಯಾನಮಂಟಪದಲ್ಲಿ ಧ್ಯಾನಕ್ಕೆ ಹೊರಡುತ್ತೇನೆ ಎನ್ನುವ ಮೂಲಕ ‘ಮೌನ ಅವಧಿ’ಯ ನಿರ್ಬಂಧಗಳನ್ನು ಉಲ್ಲಂಘಿಸಿದ್ದು, ಇದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಅದರ ಬಗ್ಗೆ ಮಾಧ್ಯಮಗಳು ವರದಿ ಮಾಡದಂತೆ ಚುನಾವಣಾ ಆಯೋಗವು ಕ್ರಮ ವಹಿಸಬೇಕು ಎಂದು ಕಾಂಗ್ರೆಸ್ ಬುಧವಾರ ಒತ್ತಾಯಿಸಿದೆ.

ಕಾಂಗ್ರೆಸ್‌ನ ರಣದೀಪ್ ಸುರ್ಜೇವಾಲಾ, ಅಭಿಷೇಕ್ ಸಿಂಘ್ವಿ ಮತ್ತು ಸೈಯದ್ ನಾಸಿರ್ ಹುಸೇನ್ ಅವರ ನಿಯೋಗವು ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ಈ ಬಗ್ಗೆ ದೂರು ಸಲ್ಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.