ನವದೆಹಲಿ: ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್, ಇದರ ಭಾಗವಾಗಿ ರಾಜ್ಯದ ವಿವಿಧ ಭಾಗಗಳಿಗೆ ಹಿರಿಯ ನಾಯಕರನ್ನು ಉಸ್ತುವಾರಿಗಳಾಗಿ ನೇಮಕ ಮಾಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಭಾಗವಾರು ವೀಕ್ಷಕರನ್ನು ಹಾಗೂ ಉಸ್ತುವಾರಿಗಳನ್ನು ನೇಮಿಸಿರುವುದಾಗಿ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂಬೈ ಮತ್ತು ಕೊಂಕಣಕ್ಕೆ ಅಶೋಕ್ ಗೆಹಲೋತ್ ಹಾಗೂ ಡಾ.ಜಿ. ಪರಮೇಶ್ವರ ಅವರನ್ನು ನೇಮಿಸಿದರೆ, ವಿದರ್ಭ (ಅಮರಾವತಿ ಮತ್ತು ನಾಗ್ಪುರ) ಪ್ರದೇಶಕ್ಕೆ ಭೂಪೇಶ್ ಬಘೇಲ್, ಚರಣ್ಜಿತ್ ಸಿಂಗ್ ಹಾಗೂ ಉಮಂಗ್ ಸಿಂಗ್ರನ್ನು ನೇಮಿಸಿದ್ದಾರೆ.
ಮರಾಠವಾಡ, ಪಶ್ಚಿಮ ಮಹಾರಾಷ್ಟ್ರ ಮತ್ತು ದಕ್ಷಿಣ ಮಹಾರಾಷ್ಟ್ರಕ್ಕೆ ಕ್ರಮವಾಗಿ ಸಚಿನ್ ಪೈಲೆಟ್ ಮತ್ತು ಉತ್ತಮ್ ಕುಮಾರ್ ರೆಡ್ಡಿ, ಟಿ.ಎಸ್ ಸಿಂಗ್ಡಿಯೋ ಮತ್ತು ಎಂ.ಬಿ ಪಾಟೀಲ್, ಡಾ. ಸೈಯದ್ ನಜೀರ್ ಹುಸೇನ್ ಮತ್ತು ಡಿ. ಅನಸೂಯಾ ಸೀತಕ್ಕ ಅವರನ್ನು ನೇಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.