ADVERTISEMENT

Maharashtra polls: ಬಿಜೆಪಿ–ಶಿವಸೇನೆ ಸಭೆಗೆ ಅಜಿತ್ ಪವಾರ್ ಗೈರು

ಪಿಟಿಐ
Published 22 ಅಕ್ಟೋಬರ್ 2024, 13:34 IST
Last Updated 22 ಅಕ್ಟೋಬರ್ 2024, 13:34 IST
<div class="paragraphs"><p>ಅಜಿತ್ ಪವಾರ್</p></div>

ಅಜಿತ್ ಪವಾರ್

   

– ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಿಜೆಪಿ ನಾಯಕರು ಸ್ಥಾನ ಹಂಚಿಕೆ ಕುರಿತಂತೆ ಮಂಗಳವಾರ ಮಹತ್ವದ ಸಭೆ ನಡೆಸಿದರು.

ADVERTISEMENT

ಆದಾಗ್ಯೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಈ ಸಭೆಗೆ ಗೈರಾಗಿದ್ದರು. 

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅಜಿತ್ ಪವಾರ್ ಅವರು, ಬಿಜೆಪಿ ಮತ್ತು ಶಿವಸೇನೆ ನಡುವೆ ಕೆಲವು ಸ್ಥಾನಗಳ ಹಂಚಿಕೆ ನಿರ್ಧಾರ ತೆಗೆದುಕೊಳ್ಳುವಾಗ ನಾನು ಸಭೆಯಲ್ಲಿ ಹಾಜರಾಗಬೇಕಾದ ಅಗತ್ಯವಿಲ್ಲ ಎಂದರು. ಮೈತ್ರಿಯ ಚರ್ಚೆ ನಡೆಯುವಾಗ ನಾನು ಭಾಗವಹಿಸುವೆ ಎಂದರು.

 288 ಸ್ಥಾನಗಳ ಪೈಕಿ ಬಿಜೆಪಿ 156, ಶಿವಸೇನೆ 78, ಎನ್‌ಸಿಪಿ 54 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.