ADVERTISEMENT

ಸಂದೇಶ್‌ಖಾಲಿಗೆ ಭೇಟಿ ನೀಡಲು ಇ.ಸಿ ಅನುಮತಿ ಕೇಳಿದ ಎನ್‌ಸಿಡಬ್ಲ್ಯು

ಪಿಟಿಐ
Published 3 ಜೂನ್ 2024, 16:08 IST
Last Updated 3 ಜೂನ್ 2024, 16:08 IST
ರೇಖಾ ಶರ್ಮ
ರೇಖಾ ಶರ್ಮ   

ನವದೆಹಲಿ: ಮತದಾನ ಪೂರ್ವ ಹಿಂಸಾಚಾರ ನಡೆದಿದೆ ಎನ್ನಲಾದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಗೆ ತನಿಖೆ ಉದ್ದೇಶಕ್ಕಾಗಿ ಭೇಟಿ ನೀಡಲು ಅವಕಾಶ ನೀಡಬೇಕೆಂದು ಕೋರಿ ಚುನಾವಣಾ ಆಯೋಗಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಮುಖ್ಯಸ್ಥೆ ರೇಖಾ ಶರ್ಮ ಅವರು ಪತ್ರ ಬರೆದಿದ್ದಾರೆ. 

ಸಂದೇಶ್‌ಖಾಲಿ ಮತ್ತಿತರ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಕುರಿತು ವರದಿಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರ ಹಕ್ಕು ಕಸಿಯುವಂಥ ಪ್ರಕರಣಗಳು ನಡೆದಿದ್ದರೆ ಮತ್ತು ಮಹಿಳೆಯರಿಗೆ ರಕ್ಷಣೆ ನೀಡುವಂಥ ಕಾನೂನುಗಳು ಜಾರಿಯಾಗದಿದ್ದರೆ ಅಂಥ ಪ್ರಕರಣಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಮಾದರಿ ನೀತಿ ಸಂಹಿತೆಯ ಹೊರತಾಗಿಯೂ ಎನ್‌ಸಿಡಬ್ಲ್ಯು ತಂಡಕ್ಕೆ ಸಂದೇಶ್‌ಖಾಲಿಗೆ ಭೇಟಿ ನೀಡಲು ಅನುಮತಿ ನೀಡಬೇಕು ಎಂದು ರೇಖಾ ಅವರು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನು ಉಲ್ಲೇಖಿಸಿ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ಸಂದೇಶ್‌ಖಾಲಿ ಸೇರಿ ‍ಪಶ್ಚಿಮ ಬಂಗಾಳದ ಹಲವೆಡೆ ಮತದಾನದ ನಂತರ ಟಿಎಂಸಿ ಬೆಂಬಲಿಗರು ಮತದಾರರನ್ನು ಬೆದರಿಸುವ ಮತ್ತು ಅವರ ಮೇಲೆ ದಾಳಿ ನಡೆಸುವಂಥ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಬಿಜೆಪಿ ಆರೋಪಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.