ADVERTISEMENT

ಜಾತಿ ಗಣತಿ ಪದ ಉಚ್ಚರಿಸಲು ಮೋದಿಗೆ ಭಯ: ರಾಹುಲ್ ಗಾಂಧಿ

ಪಿಟಿಐ
Published 23 ಸೆಪ್ಟೆಂಬರ್ 2024, 13:18 IST
Last Updated 23 ಸೆಪ್ಟೆಂಬರ್ 2024, 13:18 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಬಿಜೆಪಿಯು ‘ಬಹುಜನ’ ವಿರೋಧಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ  ಸೋಮವಾರ ಟೀಕಿಸಿದ್ದಾರೆ.

‘ಎಷ್ಟೇ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೂ ಮೀಸಲಾತಿಗೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ. ಜಾತಿಗಣತಿ ಎಂಬ ಪದವನ್ನು ಉಚ್ಚರಿಸಲು ಪ್ರಧಾನಿ ನರೇಂದ್ರ ಮೋದಿ ಭಯಪಡುತ್ತಿದ್ದಾರೆ. ‘ಬಹುಜನ’ರು ಅವರ ಹಕ್ಕುಗಳನ್ನು ಪಡೆಯುವುದು ಮೋದಿಯವರಿಗೆ ಇಷ್ಟವಿಲ್ಲ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಆರೋಪಿಸಿದ್ದಾರೆ.

‘ಸಮಗ್ರ ಜಾತಿಗಣತಿ ನಡೆಸುವವರೆಗೂ ಮತ್ತು  ಶೇ 50ರಷ್ಟು ಮೀಸಲಾತಿ ಮಿತಿ ತೆಗೆದುಹಾಕುವವರೆಗೂ ಹಾಗೂ ಪ್ರತಿಯೊಂದು ವರ್ಗಕ್ಕೂ ನ್ಯಾಯ ದೊರೆಯುವವರೆಗೂ ನಾವು ವಿರಮಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.