ADVERTISEMENT

ಪ್ರಧಾನಿಗೆ ಆಂಧ್ರಪ್ರದೇಶಕ್ಕೆ ಬರುವ ಅರ್ಹತೆಯಿಲ್ಲ: ವೈ.ಎಸ್‌.ಶರ್ಮಿಳಾ

ಪಿಟಿಐ
Published 8 ಮೇ 2024, 15:29 IST
Last Updated 8 ಮೇ 2024, 15:29 IST
<div class="paragraphs"><p>ವೈ.ಎಸ್‌.ಶರ್ಮಿಳಾ</p></div>

ವೈ.ಎಸ್‌.ಶರ್ಮಿಳಾ

   

ಕಡಪ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಿಂದ ಆಂಧ್ರಪ್ರದೇಶಕ್ಕೆ ಮೋಸ ಮಾಡಿರುವುದರಿಂದ ರಾಜ್ಯಕ್ಕೆ ಬರಲು ಅವರಿಗೆ ಅರ್ಹತೆ ಇಲ್ಲ ಎಂದು ಆಂಧ್ರಪ್ರದೇಶದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಬುಧವಾರ ಹೇಳಿದ್ದಾರೆ.

‘ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆ ಒಟ್ಟಿಗೆ ನಡೆಯುತ್ತಿರುವುದರಿಂದ ಪ್ರಧಾನಿ ಆಂಧ್ರದ ಬಗ್ಗೆ ‘ಮೊಸಳೆ ಕಣ್ಣೀರು’ ಸುರಿಸುತ್ತಿದ್ದಾರೆ’ ಎಂದು ಟೀಕಿಸಿದ ಅವರು, ‘ನೀವು ಮೊದಲು ರಾಜ್ಯದ ಜನರ ಕ್ಷಮೆ ಕೇಳಿ’ ಎಂದರು. 

ADVERTISEMENT

ಪತ್ರಿಕಾ ಗೋಷ್ಠಿಯಲ್ಲಿ ರೇಡಿಯೊ ಪ್ರದರ್ಶಿಸಿದ ಅವರು, ‘ರಾಜ್ಯದ ಜನರ ‘ಮನ್‌ ಕಿ ಬಾತ್’ ಕೇಳಿಸಿಕೊಳ್ಳಲು ನಾನು ಇದನ್ನು ಕೊಡುಗೆಯನ್ನಾಗಿ ನೀಡುತ್ತಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.