ADVERTISEMENT

ಶಂಕರ ಕಣ್ಣಿನ ಆಸ್ಪತ್ರೆ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ

ಪಿಟಿಐ
Published 20 ಅಕ್ಟೋಬರ್ 2024, 11:10 IST
Last Updated 20 ಅಕ್ಟೋಬರ್ 2024, 11:10 IST
<div class="paragraphs"><p>&nbsp; ಪ್ರಧಾನಿ ಮೋದಿ&nbsp;</p></div>

  ಪ್ರಧಾನಿ ಮೋದಿ 

   

– ಪಿಟಿಐ ಚಿತ್ರ

ವಾರಾಣಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಂಸತ್‌ ಕ್ಷೇತ್ರ ವಾರಾಣಸಿಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದರು.

ADVERTISEMENT

ಕಂಚಿ ಮಠದವತಿಯಿಂದ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ದೇಶದಲ್ಲಿ ಕಂಚಿ ಮಠ ನಿರ್ಮಾಣ ಮಾಡಿರುವ 14ನೇ ಕಣ್ಣಿನ ಆಸ್ಪತ್ರೆ ಇದಾಗಿದೆ. ಪ್ರತಿ ವರ್ಷ 30 ಸಾವಿರ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಶಂಕರ ಕಣ್ಣಿನ ಆಸ್ಪತ್ರೆಯು ಕಣ್ಣಿನ ವಿವಿಧ ಸಮಸ್ಯೆಗಳಿಗಾಗಿ ಸಮಗ್ರ ಸಲಹೆ ಮತ್ತು ಚಿಕಿತ್ಸೆ ನೀಡಲಿದೆ.

ಈ ಆಸ್ಪತ್ರೆಯಿಂದ ಉತ್ತರ ಪ್ರದೇಶದ 20 ಜಿಲ್ಲೆಗಳ ಜನರಿಗೆ ಹಾಗೂ ಬಿಹಾರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಗಡಿಭಾಗದ ನಿವಾಸಿಗಳಿಗೆ ಅನುಕೂಲವಾಗಲಿದೆ.

ಆಸ್ಪತ್ರೆ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅವರು ಕಂಚಿ ಮಠದ ಶಂಕರಾಚಾರ್ಯರನ್ನು ಭೇಟಿಯಾದರು. ವೇಳೆ ರಾಜ್ಯಪಾಲರಾದ  ಅನಂದಿಬೆನ್ ಪಟೇಲ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.