ADVERTISEMENT

ನೂರು ದಿನಗಳಲ್ಲಿ 100 ಹೊಸ ತಳಿಗಳ ಅಭಿವೃದ್ಧಿಪಡಿಸಿ: ಶಿವರಾಜ್‌ ಸಿಂಗ್‌ ಚೌಹಾಣ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 16:01 IST
Last Updated 14 ಜೂನ್ 2024, 16:01 IST
   

ನವದೆಹಲಿ: ನೂರು ದಿನಗಳಲ್ಲಿ ನೂರು ಬೆಳೆಗಳ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವ‌ರು ಇಲಾಖೆಯ ಅಧಿಕಾರಿಗಳಿಗೆ ಶುಕ್ರವಾರ ನಿರ್ದೇಶನ ನೀಡಿದರು.

ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಅಧಿಕಾರಿಗಳೊಂದಿಗೆ‌ ಸಭೆ ನಡೆಸಿದ ‌ಚೌಹಾಣ್ ಅವರು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನೂರು ಹೊಸ ತಂತ್ರಜ್ಞಾನಗಳಿಗೆ ಪ್ರಮಾಣೀಕರ‌ಣ ಪತ್ರ ಪಡೆಯುವಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ(ಐಸಿಎಆರ್‌) ಸೂಚನೆ ನೀಡಿದರು.

ಕೃಷಿ ಉತ್ಪಾದನೆಯ ಹೆಚ್ಚಳದ ಅಗತ್ಯತೆಯನ್ನು ತಿಳಿಸಿದ ಚೌಹಾಣ್‌. ದೇಶದ 113 ಸಂಶೋಧನಾ ಸಂಸ್ಥೆಗಳ ಕಾರ್ಯಕ್ಷಮತೆ ಮತ್ತು ನಿರ್ದಿಷ್ಟ ಗುರಿಯನ್ನು ತಲುಪದಿರಲು ಕಾರಣವಾಗಿರುವ ಅಂಶಗಳನ್ನು ಪತ್ತೆಹಚ್ಚಿ ವರದಿ ನೀಡುವಂತೆ ತಿಳಿಸಿದರು.

ADVERTISEMENT

ಕೃಷಿ ಉತ್ಪಾದನೆ ಹೆಚ್ಚಳ, ರೈತರ ಆದಾಯ ದ್ವಿಗುಣ ಮತ್ತು ಖರ್ಚು ಕಡಿಮೆಗೊಳಿಸಲು ಹಾಗೂ ಜೈವಿಕ  ಗುಣಮಟ್ಟ ವರ್ಧಿತ ಬೀಜಗಳ ಬಳಕೆಯನ್ನು ಹೆಚ್ಚಿಸಲು  ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.