ADVERTISEMENT

Video | ಗೆಳೆಯನ ಹುಟ್ಟುಹಬ್ಬದಲ್ಲಿ ನಾಯಿ ತಂದ ಪಜೀತಿ: ಪ್ರಾಣ ತೆತ್ತ ವಿದ್ಯಾರ್ಥಿ

ಪಿಟಿಐ
Published 22 ಅಕ್ಟೋಬರ್ 2024, 11:17 IST
Last Updated 22 ಅಕ್ಟೋಬರ್ 2024, 11:17 IST
<div class="paragraphs"><p>ಬೀದಿ ನಾಯಿ (ಸಾಂಕೇತಿಕ ಚಿತ್ರ)</p></div>

ಬೀದಿ ನಾಯಿ (ಸಾಂಕೇತಿಕ ಚಿತ್ರ)

   

ಹೈದರಾಬಾದ್: ಇಲ್ಲಿನ ಹೋಟೆಲ್‌ವೊಂದರಲ್ಲಿ ಗೆಳೆಯನ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ ಕಾರಿಡಾರ್‌ನಲ್ಲಿದ್ದ ನಾಯಿ ಓಡಿಸಲು ಹೋಗಿ ಆಯಾ ತಪ್ಪಿ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ.

ಮೃತನನ್ನು ಉದಯ ಕುಮಾರ್ (24) ಎಂದು ಗುರುತಿಸಲಾಗಿದೆ. ಈತ ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ADVERTISEMENT

ಭಾನುವಾರ ಸಂಜೆ ಚಂದಾನಗರದ ವಿ.ವಿ. ಪ್ರೈಡ್ ಹೋಟೆಲ್‌ನ ಮೂರನೇ ಮಹಡಿಯಲ್ಲಿ ಸ್ನೇಹಿತನ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿತ್ತು. ಈ ವೇಳೆ ಕಾರಿಡಾರ್‌ನಲ್ಲಿದ್ದ ನಾಯಿ ಕಂಡು, ಅದನ್ನು ಹೊರಗೆ ಒಡಿಸಲು ಉದಯ್‌ ಕುಮಾರ್‌ ಮುಂದಾಗಿದ್ದಾನೆ. ನಾಯಿ ಹಿಂದೆ ವೇಗವಾಗಿ ಓಡಿದ ಉದಯ ಕುಮಾರ್‌ ಕಾಲು ಜಾರಿ ತೆರೆದ ಕಿಟಕಿಯಿಂದ ಹೊರಗೆ ಬಿದ್ದುಹೋಗಿದ್ದಾನೆ.

ಈ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಲಾಗಿದೆ.

ಉದಯ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಆತನ ಶವವನ್ನು ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಚಂದಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.