ADVERTISEMENT

ಕೇಜ್ರಿವಾಲ್ ಆಪ್ತ ಬಿಭವ್ ಜಾಮೀನು ಕುರಿತು ಪೊಲೀಸರ ನಿಲುವೇನು?: ದೆಹಲಿ ಹೈಕೋರ್ಟ್

ಪಿಟಿಐ
Published 14 ಜೂನ್ 2024, 9:37 IST
Last Updated 14 ಜೂನ್ 2024, 9:37 IST
<div class="paragraphs"><p>ಪೊಲೀಸರ ವಶದಲ್ಲಿ ಬಿಭವ್‌ ಕುಮಾರ್‌. (ಒಳಚಿತ್ರದಲ್ಲಿ&nbsp;ಸ್ವಾತಿ ಮಾಲಿವಾಲ್‌)</p><p><br></p></div>

ಪೊಲೀಸರ ವಶದಲ್ಲಿ ಬಿಭವ್‌ ಕುಮಾರ್‌. (ಒಳಚಿತ್ರದಲ್ಲಿ ಸ್ವಾತಿ ಮಾಲಿವಾಲ್‌)


   

–ಪಿಟಿಐ ಚಿತ್ರಗಳು

ADVERTISEMENT

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್‌ ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಭವ್‌ ಕುಮಾರ್ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಪೊಲೀಸರ ನಿಲುವು ಏನು ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಪ್ರಶ್ನಿಸಿದೆ.

ಬಿಭವ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್‌ ಶರ್ಮಾ ನೇತೃತ್ವದ ರಜಾ ಕಾಲದ ನ್ಯಾಯಪೀಠ, ಪ್ರಕರಣದ ಸದ್ಯದ ಸ್ಥಿತಿ ಕುರಿತು ವರದಿ ನೀಡುವಂತೆ ಮತ್ತು ಜಾಮೀನು ನೀಡುವ ಕುರಿತು ನಿಲುವನ್ನು ಸ್ಪಷ್ಟಪಡಿಸುವಂತೆ ಪೊಲೀಸರಿಗೆ ನೋಟಿಸ್ ನೀಡಿದೆ.

ಈ ಕುರಿತ ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆಪ್ತರೂ ಆಗಿರುವ ಬಿಭವ್‌ ಅವರನ್ನು ಮೇ 18ರಂದು ಬಂಧಿಸಲಾಗಿದೆ. ಮಾಲಿವಾಲ್ ಅವರಿಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಮೇ 13ರಂದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬಿಭವ್‌ ಮೇಲಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಬಿಭವ್‌, ಜಾಮೀನು ಕೋರಿ ತೀಸ್‌ ಹಝಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಬಂಧಿತರ ವಿರುದ್ಧದ ಆರೋಪ 'ಗಂಭೀರ ಮತ್ತು ಆತಂಕಕಾರಿ' ಎನ್ನುವ ಮೂಲಕ ಜಾಮೀನು ನೀಡಲು ಜೂನ್‌ 7ರಂದು ನಿರಾಕರಿಸಿತ್ತು.

ಅದಕ್ಕೂ ಮೊದಲು ಮೇ 27ರಂದು ಸೆಷನ್ಸ್‌ ನ್ಯಾಯಾಲಯವು ಬಿಭವ್‌ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.