ADVERTISEMENT

ಎಂಥಾ ಮಾತು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 23:50 IST
Last Updated 6 ಏಪ್ರಿಲ್ 2024, 23:50 IST
ಕನ್ಹಯ್ಯ ಕುಮಾರ್
ಕನ್ಹಯ್ಯ ಕುಮಾರ್   

ಆಡಳಿತಾರೂಢ ಬಿಜೆಪಿಯು ರಾಮನ ಹೆಸರಿನಲ್ಲಿ ನಾಥೂರಾಮ್‌ನ ಕೋಮುವಾದಿ ಕಾರ್ಯಸೂಚಿಯನ್ನು ಪ್ರಚಾರ ಮಾಡುತ್ತಿದೆ. ವ್ಯಕ್ತಿವಾದವು ಪರಿವಾರವಾದಕ್ಕಿಂತಲೂ ಹೆಚ್ಚು ಅಪಾಯಕಾರಿ. ಗಾಂಧಿ–ನೆಹರೂ ಕುಟುಂಬದ ಕೊಡುಗೆಗಳನ್ನು ಕಡೆಗಣಿಸುವ ಯತ್ನ ನಡೆಯುತ್ತಿದೆ. ಬಿಜೆಪಿಯು ಹಿಂದೂ ಧರ್ಮದ ಹಿರಿಮೆಗೆ ಚ್ಯುತಿ ತರಲು ಯತ್ನಿಸುತ್ತಿದೆ. ರಾಮನ ಪರಿಕಲ್ಪನೆಯಲ್ಲಿ ದ್ವೇಷಕ್ಕೆ ಸ್ಥಾನವಿಲ್ಲ. ಬಿಜೆಪಿಯು ರಾಮನನ್ನು ನಂಬುವ ಜನರಿಗೆ ಮೋಸ ಮಾಡುತ್ತಿದೆ

-ಕನ್ಹಯ್ಯ ಕುಮಾರ್, ಕಾಂಗ್ರೆಸ್ ನಾಯಕ

ನಿಷೇಧಿತ ‍ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ರಾಜಕೀಯ ಸಂಘಟನೆಯಾದ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ಬೆಂಬಲ ಪಡೆಯುವ ಹಾಗೂ ಸಂವಿಧಾನವನ್ನು ಸುಟ್ಟಿರುವ ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್‌ ಪಕ್ಷವು ಪ್ರಜಾಪ್ರಭುತ್ವವನ್ನು ಹೇಗೆ ರಕ್ಷಿಸಲಿದೆ? ‘ಅಭಿವೃದ್ಧಿ ಹೊಂದಿದ ಭಾರತ’ ತನ್ನ ಕಾರ್ಯಸೂಚಿ ಎಂದು ಬಿಜೆಪಿಯು ಹೆಮ್ಮೆಯಿಂದ ಘೋಷಿಸಿದೆ. ಬಿಜೆಪಿಗೆ ಮತ ನೀಡಿದರೆ ಅದು ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಮತ ನೀಡಿದಂತೆ

ADVERTISEMENT

-ಸ್ಮೃತಿ ಇರಾನಿ, ಕೇಂದ್ರ ಸಚಿವೆ

ಸ್ಮೃತಿ ಇರಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.