ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 30 ಸೆಪ್ಟೆಂಬರ್‌ 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2023, 12:55 IST
Last Updated 30 ಸೆಪ್ಟೆಂಬರ್ 2023, 12:55 IST
<div class="paragraphs"><p>ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p></div>

ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

   

₹ 854 ಕೋಟಿ ಸೈಬರ್ ವಂಚನೆ: ಜಾಲ ಭೇದಿಸಿದ ಸಿಸಿಬಿ, ಆರು ಮಂದಿ ಬಂಧನ, ICC World Cup 2023: ವಿಶ್ವಕಪ್ ತಂಡದಲ್ಲಿರುತ್ತೇನೆ ಎಂದುಕೊಂಡಿರಲಿಲ್ಲ –ಅಶ್ವಿನ್, ಚುನಾವಣಾ ಬಾಂಡ್‌: ‘ಕಾನೂನುಬದ್ಧ ಲಂಚ’ ಎಂದು ಆರೋಪಿಸಿದ ಚಿದಂಬರಂ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ

₹ 854 ಕೋಟಿ ಸೈಬರ್ ವಂಚನೆ: ಜಾಲ ಭೇದಿಸಿದ ಸಿಸಿಬಿ, ಆರು ಮಂದಿ ಬಂಧನ

ಸಾಂದರ್ಭಿಕ ಚಿತ್ರ 

ADVERTISEMENT

ರಾಜ್ಯ ಹಾಗೂ ಹೊರ ರಾಜ್ಯಗಳ ಜನರಿಗೆ ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ₹ 854 ಕೋಟಿ ಸಂಗ್ರಹಿಸಿ ವಂಚಿಸಿದ್ದ ಜಾಲವನ್ನು ನಗರದ ಸಿಸಿಬಿ ಪೊಲೀಸರು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ.

ICC World Cup 2023: ವಿಶ್ವಕಪ್ ತಂಡದಲ್ಲಿರುತ್ತೇನೆ ಎಂದುಕೊಂಡಿರಲಿಲ್ಲ –ಅಶ್ವಿನ್

ಆರ್.ಅಶ್ವಿನ್‌

ಸ್ಪಿನ್ನರ್‌ ಆರ್.ಅಶ್ವಿನ್‌ ಅವರು ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಕೊನೇ ಕ್ಷಣದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಸಂಕಲ್ಪ ಸಪ್ತಾಹ | 2024ರ ಅಕ್ಟೋಬರ್‌ಗೆ ಮತ್ತೆ ಸಿಗೋಣ: ಪ್ರಧಾನಿ ಮೋದಿ

‘ಸಂಕಲ್ಪ ಸಪ್ತಾಹ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

‘ಮಹತ್ವಾಕಾಂಕ್ಷೆಯ ಜಿಲ್ಲೆಗಳು’ ಕಾರ್ಯಕ್ರಮದ ಆಧಾರದಲ್ಲಿ ‘ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು’ ಕಾರ್ಯಕ್ರಮವನ್ನು ರೂಪಿಸಿದ್ದು, ಇದರ ಯಶಸ್ಸು ಪರಿಶೀಲಿಸಲು ಮುಂದಿನ ವರ್ಷ ನಾನೇ ಬರುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಿಜೆಪಿ-ಜೆಡಿಎಸ್‌ ಮೈತ್ರಿ | ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಾಗಿದೆ: ಇಬ್ರಾಹಿಂ

ಸಿ.ಎಂ.ಇಬ್ರಾಹಿಂ

ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದಾಗಿ ಪಕ್ಷದ ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಾಗಿದೆ. ಅ.16ರ ನಂತರ ಸೂಕ್ತನಿರ್ಧಾರ ತೆಗೆದುಕೊಳ್ಳುವೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ಪತ್ರಿಕೆಗಳಲ್ಲಿ ಆಹಾರ ಕೊಡುವುದನ್ನು ನಿಲ್ಲಿಸುವಂತೆ ಮಾರಾಟಗಾರರಿಗೆ FSSAI ತಾಕೀತು

ಸಾಂದರ್ಭಿಕ ಚಿತ್ರ

ದಿನಪತ್ರಿಕೆ ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಆಹಾರಗಳನ್ನು ಹಾಕಿ ಕೊಡುವುದು, ಕಟ್ಟಿ ಕೊಡುವುದು, ಸಂಗ್ರಹಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರಾಟಗಾರರಿಗೆ ತಾಕೀತು ಮಾಡಿದೆ‌.

ಚುನಾವಣಾ ಬಾಂಡ್‌: ‘ಕಾನೂನುಬದ್ಧ ಲಂಚ’ ಎಂದು ಆರೋಪಿಸಿದ ಚಿದಂಬರಂ

ಪಿ. ಚಿದಂಬರಂ

ಚುನಾವಣಾ ಬಾಂಡ್‌ ಎಂಬುದು ‘ಕಾನೂಬು ಬದ್ಧ ಲಂಚ‘ ಎಂದು ಆರೋಪಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ, ಅ. 4ರಂದು ಇದು ಮತ್ತೆ ತೆರೆಯಲಿದ್ದು ಬಿಜೆಪಿಗೆ ಚಿನ್ನದ ಫಸಲನ್ನೇ ನೀಡಲಿದೆ ಎಂದಿದ್ದಾರೆ.

ಸೈನಿಕರ ಹೊಸ ಪಿಂಚಣಿ ನೀತಿ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ

ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾದ ಸೈನಿಕರಿಗೆ ನೀಡಲಾಗುವ ಪಿಂಚಣಿಯ ಹೊಸ ನೀತಿ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

Casting couch | ಮಲಗಲು ಮೇಕಪ್ ಕಲಾವಿದನನ್ನು ಕರೆದಿದ್ದೆ: ನಟಿ ಇಶಾ ಗುಪ್ತಾ

ಇಶಾ ಗುಪ್ತಾ

 ಜನ್ನತ್– 2 ಖ್ಯಾತಿಯ ನಟಿ, ಮಾಡೆಲ್ ಇಶಾ ಗುಪ್ತಾ ತಮ್ಮ ಬೋಲ್ಡ್ ಅಭಿನಯ ಹಾಗೂ ಲುಕ್‌ನಿಂದ ಹೆಚ್ಚು ಸದ್ದು ಮಾಡಿದವರು.

ಮೂರೇ ತಿಂಗಳಲ್ಲಿ 4 ಪ್ರಮುಖ ಕಾರ್ಯ ಪೂರೈಸಿದ ಪ್ರಧಾನಿ ಮೋದಿ: ಅಮಿತ್ ಶಾ ಮೆಚ್ಚುಗೆ

ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ

ಹೊಸ ಸಂಸತ್ ಭವನ ಉದ್ಘಾಟನೆ, ಚಂದ್ರಯಾನ–3 ಯೋಜನೆ, ಜಿ–20 ಸಮ್ಮೇಳನದ ಯಶಸ್ಸು ಹಾಗೂ ಮಹಿಳಾ ಮೀಸಲು ಮಸೂದೆ ಅಂಗೀಕಾರ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಮೂರೇ ತಿಂಗಳಲ್ಲಿ ನಾಲ್ಕು ಪ್ರಮುಖ ಕಾರ್ಯಗಳನ್ನು ಪೂರೈಸಲಾಗಿದೆ ಎಂದು ಶ್ಲಾಘಿಸಿದ್ದಾರೆ.

ಸ್ಕಾಟ್ಲೆಂಡ್‌: ಭಾರತೀಯ ರಾಜತಾಂತ್ರಿಕ ಅಧಿಕಾರಿಗೆ ಗುರುದ್ವಾರ ಪ್ರವೇಶ ನಿರಾಕರಣೆ

ವಿಕ್ರಮ್‌ ದೊರೈಸ್ವಾಮಿ ಅವರನ್ನು ಕಾರಿನಿಂದ ಕೆಳಗಿಳಿಯದಂತೆ ತಡೆದ ವ್ಯಕ್ತಿಗಳು

ಖಾಲಿಸ್ತಾನಿ ಭಯೋತ್ಪಾದಕ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ ಬೆನ್ನಲ್ಲೇ ಬ್ರಿಟನ್‌ನ ಭಾರತೀಯ ರಾಜತಾಂತ್ರಿಕ ಅಧಿಕಾರಿ ವಿಕ್ರಮ್ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗ್ಲಾಸ್ಕೊದಲ್ಲಿರುವ ಗುರುದ್ವಾರಕ್ಕೆ ಪ್ರವೇಶಿಸದಂತೆ ವ್ಯಕ್ತಿಗಳಿಬ್ಬರು ತಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.