ADVERTISEMENT

ಶೀಘ್ರದಲ್ಲಿ ಶ್ರೀನಗರಕ್ಕೆ ರೈಲು ಸಂಪರ್ಕ; ಪ್ರಧಾನಿ ಮೋದಿ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:46 IST
Last Updated 14 ಸೆಪ್ಟೆಂಬರ್ 2024, 15:46 IST
<div class="paragraphs"><p>&nbsp; ಪ್ರಧಾನಿ ಮೋದಿ&nbsp;</p></div>

  ಪ್ರಧಾನಿ ಮೋದಿ 

   

– ಪಿಟಿಐ ಚಿತ್ರ

ಜಮ್ಮು : ‘ಜಮ್ಮು ಮತ್ತು ಕಾಶ್ಮೀರ ಸಂ‍ಪರ್ಕ ಹೊಂದದ ಎಲ್ಲ ಪ್ರದೇಶಗಳಿಗೂ ಶೀಘ್ರದಲ್ಲಿ ರೈಲು ಸಂಪರ್ಕ ದೊರೆಯಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ADVERTISEMENT

‘ಕಣಿವೆಯ ರಾಮ್‌ಬನ್‌, ಡೋಡಾ, ಕಿಶ್ತವಾಢ್ ಹಾಗೂ ಕಾಶ್ಮೀರಕ್ಕೆ ನವದೆಹಲಿಯಿಂದಲೇ ನೇರ ರೈಲು ಸಂಪರ್ಕ ಲಭ್ಯವಾಗಲಿದೆ. ನಿಮ್ಮ ಕನಸುಗಳನ್ನು ನಾನು ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಶ್ರೀನಗರದಿಂದ ರಾಮಬನ್‌ಗೆ ಶೀಘ್ರದಲ್ಲಿಯೇ ರೈಲು ಸಂಚಾರ ಆರಂಭಗೊಳ್ಳಲಿದೆ. ರೈಲು ಮಾರ್ಗ, ನಿಲ್ದಾಣ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರವೂ ಆರಂಭಗೊಂಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.