ADVERTISEMENT

ಕಾಶ್ಮೀರ | ಉಗ್ರರ ದಾಳಿಗೆ ಇಬ್ಬರು ವಲಸೆ ಕಾರ್ಮಿಕರ ಸಾವು

ಪಿಟಿಐ
Published 20 ಅಕ್ಟೋಬರ್ 2024, 16:24 IST
Last Updated 20 ಅಕ್ಟೋಬರ್ 2024, 16:24 IST
-
-   

ಶ್ರೀನಗರ: ಕೇಂದ್ರ ಕಾಶ್ಮೀರದ ಗಾಂದರಬಲ್‌ ಜಿಲ್ಲೆಯಲ್ಲಿ ಉಗ್ರರು ಭಾನುವಾರ ನಡೆಸಿದ ದಾಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ.

ಜಿಲ್ಲೆಯ ಗುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಸಮೀಪ ಈ ದಾಳಿ ನಡೆದಿದೆ.

ನಿರ್ಮಾಣ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯು ಕಾರ್ಮಿಕರ ವಾಸಕ್ಕೆ ನಿರ್ಮಿಸಿರುವ ಮನೆಗಳ ಮೇಲೆ ಉಗ್ರರು ಸಂಜೆ ವೇಳೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದಾಳಿ ಸುದ್ದಿ ತಿಳಿಯುತ್ತಿದ್ದಂತೆಯೇ, ಪೊಲೀಸ್ ಹಾಗೂ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ, ಹಂತಕರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿವೆ ಎಂದೂ ತಿಳಿಸಿದ್ದಾರೆ.

ಆಪ್ಕೊ ಇನ್‌ಫ್ರಾಟೆಕ್‌ ಕಂಪನಿಯು ಈ ಸುರಂಗ ನಿರ್ಮಿಸುತ್ತಿದೆ. 6.5 ಕಿ.ಮೀ. ಉದ್ದದ ಈ ಸುರಂಗವು ಗಗನ್‌ಗೀರ್ ಮತ್ತು ಸೋನಮಾರ್ಗ ಗಿರಿಧಾಮದ ಶಿತ್ಕಡಿಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.