ADVERTISEMENT

ಉತ್ತಾರಾಖಂಡ | ಆದಿ ಕೈಲಾಸ ಯಾತ್ರೆ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 13:37 IST
Last Updated 24 ಜೂನ್ 2024, 13:37 IST
<div class="paragraphs"><p>ಸಂಗ್ರಹ ಚಿತ್ರ&nbsp;</p></div>

ಸಂಗ್ರಹ ಚಿತ್ರ 

   

ಪಿಥೌರಗಢ (ಉತ್ತಾರಾಖಂಡ): ಇಲ್ಲಿಯ ಆದಿ ಕೈಲಾಸ ಮತ್ತು ಓಂ ಪರ್ವತ ಯಾತ್ರೆಯನ್ನು ಮುಂಗಾರು ಮಳೆಯ ಕಾರಣಕ್ಕಾಗಿ ಜೂನ್‌ 25ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಯಾತ್ರೆಯು ಮೇ 13ರಿಂದ ಆರಂಭವಾಗಿತ್ತು. ಸುಮಾರು 600 ಯಾತ್ರಿಕರು ಭಾಗಿಯಾಗಿದ್ದರು.

ADVERTISEMENT

ಎತ್ತರದ ಪ್ರದೇಶಗಳಲ್ಲಿ ಮಳೆಯಿಂದ ಯಾತ್ರಿಕರು ಪ್ರಾಯಾಸಪಡಬೇಕಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಸೆಪ್ಟೆಂಬರ್‌ನಿಂದ ಯಾತ್ರೆಯ ಬುಕಿಂಗ್‌ ಪುನಃ ಅರಂಭವಾಗಲಿದೆ ಎಂದು ಕುಮೋನ್‌ ಮಂಡಲ್‌ ವಿಕಾಸ ನಿಗಮದ ಅಧಿಕಾರಿ ಎಲ್‌.ಎಂ. ತಿವಾರಿ ಹೇಳಿದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೋಲಿಂಕಾಂಗ್‌ಗೆ ಭೇಟಿ ನೀಡಿದ್ದರು. ಅಲ್ಲಿಂದ ಈಚೆಗೆ ಈ ಯಾತ್ರೆಯು ಪ್ರಸಿದ್ಧಿಗೆ ಬಂದಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.