ADVERTISEMENT

ಕಲಾಪಕ್ಕೆ ಅಡ್ಡಿ: ಲೋಕಸಭೆಯಿಂದ ಕಾಂಗ್ರೆಸ್‌ನ ಐವರು ಸಂಸದರು ಅಮಾನತು

ಪಿಟಿಐ
Published 14 ಡಿಸೆಂಬರ್ 2023, 9:24 IST
Last Updated 14 ಡಿಸೆಂಬರ್ 2023, 9:24 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

– ಪಿಟಿಐ ಚಿತ್ರ

ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ನ ಐವರು ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತು ಮಾಡಲಾಗಿದೆ.

ADVERTISEMENT

ಐವರು ಸಂಸದರನ್ನು ಅಮಾನತು ಮಾಡುವ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದರು. ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ ಲಭಿಸಿತು.

ಟಿ.ಎನ್ ಪ್ರತಾಪ‍ನ್, ಹೈಬಿ ಈಡನ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಹಾಗೂ ಡೀನ್ ಕುರಿಯಕೋಸ್ ಅಮಾನತಾದವರು.

ಈ ಪೈಕಿ ಜ್ಯೋತಿಮಣಿ ತಮಿಳುನಾಡಿನವರು. ಉಳಿದವರೆಲ್ಲರೂ ಕೇರಳದ ವಿವಿಧ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಸದನ ಹಾಗೂ ಪೀಠದ ಅಧಿಕಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರಿಂದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಅಮಾನತು ಮಾಡಲು ಇವರ ಹೆಸರನ್ನು ಪೀಠವೇ ಸೂಚಿಸಿತ್ತು. ಅಮಾನತು ನಿರ್ಣಯ ಮಂಡಿಸುವಾಗ ಬಿಜೆಡಿ ಸಂಸದ ಬಿ. ಮಹ್ತಾಬ್ ಅವರು ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.