ADVERTISEMENT

ಕಾಂಪಾ: ರಾಜ್ಯಕ್ಕೆ ₹363 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:49 IST
Last Updated 12 ಜನವರಿ 2024, 15:49 IST
<div class="paragraphs"><p>ಈಶ್ವರ ಬಿ.ಖಂಡ್ರೆ</p></div>

ಈಶ್ವರ ಬಿ.ಖಂಡ್ರೆ

   

ನವದೆಹಲಿ: ಪರಿಹಾರಾತ್ಮಕ ಅರಣ್ಯೀಕರಣ ನಿಧಿ (ಕಾಂಪಾ) ಅಡಿಯಲ್ಲಿ ಕರ್ನಾಟಕದ ಸಂಚಿತ ನಿಧಿಯ ಪೈಕಿ ₹363.44 ಕೋಟಿಯನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು. 

ನವದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್‌ ಅವರನ್ನು ಶುಕ್ರವಾರ ಭೇಟಿ ಮಾಡಿದ ಖಂಡ್ರೆ, ಈ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಬಳಿಕ ಸಚಿವಾಲಯವು ಹಣ ಬಿಡುಗಡೆ ಮಾಡಿತು.

ADVERTISEMENT

2019ರ ಫೆಬ್ರುವರಿ 8ರಿಂದ 2022ರ ಮಾರ್ಚ್‌ 31ರ ಅವಧಿಯಲ್ಲಿ ಕಾಂಪಾ ಹಣದ ಪೈಕಿ ಕೇಂದ್ರ ನಿಧಿಯ ಹಣ ಕಡಿತ ಮಾಡಿಕೊಂಡು ಉಳಿದ ಹಣ ಬಿಡುಗಡೆ ಮಾಡಲಾಗಿದೆ. ಪರಿಹಾರ ಅರಣ್ಯೀಕರಣಕ್ಕೆ ₹209.21 ಕೋಟಿ, ಪ್ರಸ್ತುತ ಅರಣ್ಯದ ಮೌಲ್ಯದ ಆಧಾರದಲ್ಲಿ ₹98.36 ಕೋಟಿ ಮತ್ತು ಇತರ ವೆಚ್ಚಕ್ಕಾಗಿ ₹55.86 ಕೋಟಿ ವರ್ಗಾವಣೆಗೆ ಕೇಂದ್ರ ಅನುಮೋದನೆ ನೀಡಿದೆ ಎಂದು ಖಂಡ್ರೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.