ಬೆಂಗಳೂರು: ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಶಾಲಾ ಶಿಕ್ಷಕರಿಗೆ ಬೆಳ್ಳಿ ಬಟ್ಟಲು ನೀಡುವ ಮೂಲಕ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ವಕ್ತಾರ ಪ್ರದೀಪ್ ಕುಮಾರ್ ಸೋಮವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪುಟ್ಟಣ್ಣ ಅವರ ಕಾರ್ಯಕರ್ತರು ಹೊಸಕೋಟೆ, ವಿಜಯನಗರ, ಚನ್ನಪಟ್ಟಣ, ಕನಕಪುರ, ಗೋವಿಂದರಾಜ ನಗರ ಕ್ಷೇತ್ರಗಳಲ್ಲಿ ಬೆಳ್ಳಿಯ ಬಟ್ಟಲುಗಳನ್ನು ಹಂಚಿದ್ದಾರೆ. ಇದು ಚುನಾವಣೆಯ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳ್ಳಿ ಬಟ್ಟಲು ಇರುವ ಬಾಕ್ಸ್, ಕವರ್ ಮೇಲೆ ಪುಟ್ಟಣ್ಣ ಅವರ ಹೆಸರು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ನಮೂದಿಸಿದ್ದಾರೆ. ಅವುಗಳನ್ನು ಮಹಿಳಾ ಕಾರ್ಯಕರ್ತೆಯೊಬ್ಬರು ಶಿಕ್ಷಕರಿಗೆ ವಿತರಿಸುತ್ತಿರುವ ಚಿತ್ರಗಳನ್ನೂ ಜೆಡಿಎಸ್ ಪಕ್ಷ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.