ADVERTISEMENT

ಎಚ್‌.ಸಿ. ಮಹದೇವಪ್ಪ ನಿವಾಸದಲ್ಲಿ ದಲಿತ ಸಚಿವರ ಗೋಪ್ಯ ಸಭೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 23:01 IST
Last Updated 2 ಅಕ್ಟೋಬರ್ 2024, 23:01 IST
<div class="paragraphs"><p>ಡಾ. ಎಚ್‌.ಸಿ. ಮಹದೇವಪ್ಪ</p></div>

ಡಾ. ಎಚ್‌.ಸಿ. ಮಹದೇವಪ್ಪ

   

ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ನಿವಾಸದಲ್ಲಿ ಮಂಗಳವಾರ ರಾತ್ರಿ ಗೌಪ್ಯ ಸಭೆ ನಡೆದಿದೆ. ಈ ಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭಾಗಿಯಾಗಿದ್ದರು.

ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳ ಕಾರಣಕ್ಕೆ ಈ ಸಭೆ ಮಹತ್ವ ಪಡೆದು‌ಕೊಂಡಿದೆ.

ADVERTISEMENT

ಮುಡಾ ಪ್ರಕರಣದಲ್ಲಿ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿರುವ ಎಐಸಿಸಿ ನಾಯಕರು, ಅಗತ್ಯ ಸಂದರ್ಭ ನಿರೀಕ್ಷಿಸಿ ‘ಪ್ಲಾನ್‌ -ಬಿ’ ಕೂಡ ಸಿದ್ಧಪಡಿಸಿಕೊಂಡಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಈ ಸಭೆ ನಡೆದಿರುವುದು ಕುತೂಹಲ ಹೆಚ್ಚಿದೆ.

ನಾಯಕತ್ವ ಬದಲಾವಣೆ ಸಂದರ್ಭ ಎದುರಾದರೆ, ಮುಂದಿನ ಅವಕಾಶವನ್ನು ಪರಿಶಿಷ್ಟ ಸಮುದಾಯ ತಪ್ಪಿಸಿಕೊಳ್ಳಬಾರದು ಎಂಬುದು ಈ ಸಭೆಯ ಕಾರ್ಯಸೂಚಿಯಾಗಿತ್ತು ಎಂದೂ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.