ADVERTISEMENT

Video | ಬರದಿಂದ ಬದುಕು ದುಸ್ತರ: ಕುರಿಗಾಹಿಗಳಿಗೆ ಸಿಗದ 'ಅನುಗ್ರಹ'

ಪ್ರಜಾವಾಣಿ ವಿಶೇಷ
Published 26 ಮೇ 2024, 2:47 IST
Last Updated 26 ಮೇ 2024, 2:47 IST

ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ ಅಲ್ಲದೇ ಆಂಧ್ರ ಪ್ರದೇಶದ ಕುರಿಗಾಹಿಗಳು ಅಲ್ಲಲ್ಲಿ ಹೆಚ್ಚು ಕಾಣಸಿಗುತ್ತಾರೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು 2019ರಲ್ಲಿ ನಡೆಸಿದ 20ನೇ ಜಾನುವಾರು ಗಣತಿ ಪ್ರಕಾರ, ರಾಜ್ಯದಲ್ಲಿ 1.10 ಕೋಟಿ ಕುರಿಗಳು ಮತ್ತು 61.69 ಲಕ್ಷ ಮೇಕೆಗಳು ಇವೆ. ಬರ ಪರಿಣಾಮ ಈ ಬಾರಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹಿಂಡು ಕುರಿಗಳೊಂದಿಗೆ ಬೆಳಗಾವಿ, ವಿಜಯಪುರ ಜಿಲ್ಲೆಯ ಬಹುತೇಕ ಕುರಿಗಾಹಿಗಳು ಹೋಗಿಲ್ಲ. ಕುರಿ ಸಾಕಣೆಯನ್ನೇ ನಂಬಿದವರ ಬದುಕು ದುಸ್ತರವಾಗಿದೆ. ಇವರಿಗಾಗಿಯೇ ಸರ್ಕಾರ ರೂಪಿಸಿರುವ ‘ಅನುಗ್ರಹ’ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕುರಿಗಾಹಿಗಳ ಒಟ್ಟಾರೆ ಬದುಕಿನ ಚಿತ್ರಣ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.