ಬೆಂಗಳೂರು: ‘ರಾಜ್ಯದ ಯುವಕರೆಲ್ಲರೂ ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ ಎಚ್ಎಂಟಿ ಕೈಗಡಿಯಾರಗಳನ್ನು ಕಟ್ಟಿಕೊಳ್ಳಬೇಕು’ ಎಂದು ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ ಅವರು ಖರೀದಿಸಿ ತಮ್ಮ ಕೈಗೆ ಕಟ್ಟಿದ ಎಚ್ಎಂಟಿ ಕೈಗಡಿಯಾರದ ಚಿತ್ರವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನಿಖಿಲ್, ‘ನಮ್ಮ ಎಚ್ಎಂಟಿ, ನಮ್ಮ ಹೆಮ್ಮೆ’ ಎಂದಿದ್ದಾರೆ.
‘ಎಚ್ಎಂಟಿ ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯನಾಡಿಯಾಗಿತ್ತು. ನಮ್ಮ ತಲೆಮಾರಿನ ಯುವಜನರಿಗೆ ಎಚ್ಎಂಟಿ ಕೈಗಡಿಯಾರ ಎಂದರೆ ದೊಡ್ಡ ವಿಷಯವಾಗಿತ್ತು. ಈಗ ನಾನು ಎಚ್ಎಂಟಿ ಕಟ್ಟಿದ್ದೇನೆ. ನೀವೂ ಎಚ್ಎಂಟಿ ಕಟ್ಟಿಕೊಳ್ಳಿ’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.